ಕೋಮು ಭಾವನೆ ಕೆರಳಿಸಿದ ಆರೋಪ -ದೂರು ಅರ್ಜಿ ವಿಚಾರಣೆಗೆ ಠಾಣೆಗೆ ಹಾಜರಾಗುವಂತೆ ಅರುಣ್ ಪುತ್ತಿಲರಿಗೆ ನೊಟೀಸ್

0

ಪುತ್ತೂರು: ಇಸ್ಲಾಂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸಿ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಕೋಮು ಭಾವನೆ ಕೆರಳಿಸಿರುವ ಕುರಿತು ಅರುಣ್ ಕುಮಾರ್ ಪುತ್ತಿಲ ವಿರುದ್ಧ ನೀಡಿದ ದೂರಿಗೆ ಸಂಬಂಧಿಸಿ ಠಾಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಿದ್ದಾರೆ.
ಪಡೀಲ್ ನಿವಾಸಿ ಅಶ್ರಫ್ ಎಂಬವರು ದೂರು ನೀಡಿದವರು. ಸದ್ರಿ ದೂರು ಅರ್ಜಿಯ ವಿಚಾರಣೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾಧಿಕಾರಿಯವರ ಮುಂದೆ ಈ ನೋಟಿಸ್ ಸಿಕ್ಕಿದ ತಕ್ಷಣ ವಿಚಾರಣೆಯ ಬಗ್ಗೆ ಹಾಜರಾಗಬೇಕೆಂದು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here