ದರ್ಬೆ: ಔಷಧ, ಸೌಂದರ್ಯವರ್ಧಕಗಳ ಮಳಿಗೆ ಜಯಶಂಕರ ಮೆಡಿಕಲ್ಸ್ ಶುಭಾರಂಭ

0

ಪುತ್ತೂರು: ದರ್ಬೆ ಜಂಕ್ಷನ್ ನಲ್ಲಿನ ಪ್ರೇಮಾ ಬೇಕರಿ ಎದುರುಗಡೆಯ ಕೆ.ಎಂ ಗೌಡ ಬಿಲ್ಡಿಂಗ್ ನಲ್ಲಿ ಔಷಧಗಳ ಹಾಗೂ ಸೌಂದರ್ಯವರ್ಧಕಗಳ ಮಳಿಗೆ ಜಯಶಂಕರ ಮೆಡಿಕಲ್ಸ್ ಜೂ.6ರಂದು ಶುಭಾರಂಭಗೊಂಡಿತು.

ಉತ್ತಮ ಮನಸ್ಸು, ಹೃದಯವಿದ್ದಾಗ ನೆಮ್ಮದಿಯ, ಸಂತೋಷದ, ಆರೋಗ್ಯದ ಜೀವನ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ, ದೇವರು ನಮಗೆ ಜೀವನ ನಿರ್ವಹಣೆಗೆ ಯಾವುದಾದರೂ ಉದ್ಯೋಗ ಕಲ್ಪಿಸಿಕೊಟ್ಟಿರುತ್ತಾನೆ. ಮಾನವನಿಗೆ ಬೇರೆ ಬೇರೆ ರೀತಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮಾನವನಿಗೆ ಒಳ್ಳೆಯ ಆರೋಗ್ಯವನ್ನು ಹೊಂದಲು ವೈದ್ಯರುಗಳು ಶ್ರಮಿಸುತ್ತಾರೆ. ನಮ್ಮ ಆರೋಗ್ಯ ಸುಧಾರಿಸುವಲ್ಲಿ ಒಳ್ಳೆಯ ಗುಣಮಟ್ಟದ ಔಷಧಗಳ ಪೂರೈಕೆ ಸಹಕಾರಿಯಾಗುತ್ತದೆ. ನಮ್ಮಲ್ಲಿ ಉತ್ತಮ ಮನಸ್ಸು, ಹೃದಯವಿದ್ದಾಗ ನೆಮ್ಮದಿಯ, ಸಂತೋಷದ ಜೀವನ ನಮ್ಮದಾಗಬಲ್ಲುದು ಎಂದು ಹೇಳಿ ಶುಭ ಹಾರೈಸಿದರು.

ಉದ್ಯೋಗದಲ್ಲಿನ ಒಂದಂಶ ಸಮಾಜದ ಬೆಳವಣಿಗೆಯಲ್ಲಿ ತೊಡಗಿಸಿ-ಡಾ.ನಝೀರ್ ಅಹಮದ್:
ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮದ್ ಮಾತನಾಡಿ, ಜೀವನಾಧಾರಕ್ಕೆ ನಮಗೆ ಉದ್ಯೋಗ ಅಗತ್ಯ. ಉದ್ಯೋಗದಲ್ಲಿ ಸಿಗುವ ಲಾಭಾಂಶ ದ ಒಂದಂಶವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಿದರೆ ಉದ್ಯಮ ಬೆಳೆಯುತ್ತದೆ. ಯಾವುದೇ ಉದ್ಯಮ ಬೆಳೆಯಬೇಕಾದರೆ ಆ ಉದ್ಯಮದಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಆ ಸಂಸ್ಥೆ ಉತ್ತುಂಗಕ್ಕೆ ಬೆಳೆಯುತ್ತದೆ. ದೇವರ ಹಾಗೂ ಹೆತ್ತವರ ಆಶೀರ್ವಾದದಿಂದ ಆರಂಭಿಸಿದ ಈ ಮೆಡಿಕಲ್ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here