ಇರ್ವತ್ತೂರು ಪದವು ಮದರಸ ವಿದ್ಯಾರ್ಥಿಗಳಿಂದ ಪರಿಸರ ದಿನ ಆಚರಣೆ

0

ಪುತ್ತೂರು: ಮದರಸತು ದೀನಿಯ್ಯಾ ಇರ್ವತ್ತೂರು ಪದವು ಮದರಸ ವಿದ್ಯಾರ್ಥಿಗಳಿಂದ ಜೂನ್ 5 ವಿಶ್ವ ಪರಿಸರ ದಿನದ ಭಾಗವಾಗಿ ಮದರಸ ಸುತ್ತಮುತ್ತಲು ಸ್ವಚ್ಛತಾ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಸತ್ತಾರ್ ಹಾಗೂ ಮುಝಮ್ಮಿಲ್ ರವರು ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಗಿಡ ನೆಡುವ ಕಾರ್ಯಕ್ರಮದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಮಸೀದಿ ಇರ್ವತ್ತೂರು ಪದವು ಇದರ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಸದಸ್ಯರಾದ ಬದ್ರುದ್ದೀನ್, ಹಿರಿಯ ವ್ಯಕ್ತಿ ಹಂಝಾಕ, ಬಿಜೆಎಂ ಪ್ರವಾಸಿ ಗ್ರೂಪ್ ಅಧ್ಯಕ್ಷರಾದ ಎಸ್.ಪಿ ಸಲೀಂ ರವರು ಗಿಡವೊಂದು ನೆಡುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಗಿಡ ನೆಡುವುದು ಸದರ್ ಉಸ್ತಾದರಾದ ಶರ್ವಾನ್ ಸ‌ಅದಿ ಕಾಜೂರ್ ರವರ ನೇತೃತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here