ನೆಲ್ಯಾಡಿ :ಆತೂರು ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ಹಬ್ಬವನ್ನು ಆಚರಿಸಲಾಯಿತು. ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳರು ಈದ್ ಸಂದೇಶ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಸಹಾಬಾಳ್ವೆಗೆ ಒತ್ತು ನೀಡಲು ಗಾಸದಲ್ಲಿ ಪ್ಯಾಲೆಸ್ತೀನಿನ ಜನತೆಯ ಪರವಾಗಿ, ಹಜ್ ಕರ್ಮಕ್ಕೆ ತೆರಳಿದ ಹಜ್ಜಾಜ್ ಅವರ ಸೌಭಾಗ್ಯವನ್ನು ತಿಳಿಸಿ, ಮುಂದಿನ ದಿನದಲ್ಲಿ ಹಜ್ ಯಾತ್ರೆಗೆ ಅವಕಾಶ ಸಿಗಲಿ ತ್ಯಾಗ ಬಲಿದಾನ ಬಗ್ಗೆ ಇಬ್ರಾಹಿಂ ನೆಬಿ,ಪತ್ನಿ ಹಾಜಿರ ಬೀಬಿ ಮತ್ತು ಮಗ ಇಸ್ಮಾಯಿಲ್ ಅವರನ್ನು ನೆನಪಿಸಿ ಹಬ್ಬದಲ್ಲಿ ಮಾಂಸವನ್ನು ಬಡವರಿಗೆ ಹಂಚಿ ಕುಟುಂಬ ಸಂಬಂಧವನ್ನು ಬಲಗೊಳಿಸಲು ಪ್ರೀತಿ ವಿಶ್ವಾಸದಲ್ಲಿ ಜೀವಿಸಲು ಕರೆ ನೀಡುವುದರ ಮುಖಾಂತರ ಈದ್ ಸಂದೇಶ ನೀಡಿದರು.
ಆತೂರು ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಕುಂಙಿ, ಪ್ರಧಾನ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಬದ್ರಿಯಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಪ್ರಧಾನ ಅಧ್ಯಾಪಕ ಹಂಝ ಸಖಾಫಿ ಉಸ್ತಾದ್, ಬಿ.ಜೆ.ಎಂ ಮಸೀದಿಯ ಮುಅಝ್ಝಿನ್ ಲತೀಫ್ ಮುಸ್ಲಿಯಾರ್ , ಬದ್ರಿಯಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಬಿ.ಕೆ, ಡಾ.ಷಾ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜಿನ ಸಂಚಾಲಕ ಅಬ್ದುಲ್ ಅಝೀಝ್ ಕಿಡ್ಸ್ , ನೀರಾಜೆ ಮಸೀದಿಯ ಅಧ್ಯಕ್ಷ ಎನ್ ಸಿದ್ದೀಕ್, ಬಿ.ಜೆ.ಎಂ ಮಸೀದಿ ಕೋಶಾಧಿಕಾರಿ ನಝೀರ್ ಎನ್.ಕೆ, ಖಾದರ್, ಆತೂರು ಬೈಲ್ ಅಧ್ಯಕ್ಷರಾದ ಹಂಝ, ಎಸ್ಕೆ,ಎಸ್.ಎಸ್.ಎಫ್ ನ ಪ್ರಧಾನ ಕಾರ್ಯದರ್ಶಿ ಝಕರಿಯಾ ಮುಸ್ಲಿಯಾರ್, ಪೊಡಿಕುಂಙಿ ನೀರಾಜೆ ಹಾಗೂ ಆಡಳಿತ ಸಮಿತಿಯ ಸರ್ವ ಸದಸ್ಯರು ಊರಿನ ಪ್ರಮುಖ ಹಿರಿಯ ವ್ಯಕ್ತಿಗಳು, ಕಿರಿಯರು, ಮಕ್ಕಳು ಸಹಿತ ನೂರಾರು ಜನರು ಭಾಗವಹಿಸಿದರು.