ನವೋದಯ, ಸೈನಿಕ ಉತ್ತಮ ಫಲಿತಾಂಶದ ಬೆನ್ನಲ್ಲೇ ಮೊರಾರ್ಜಿ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲೂ ವಿದ್ಯಾಮಾತಾ ಅಕಾಡೆಮಿಯ ಸಾಧನೆ

0

ಮೊರಾರ್ಜಿ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾಮಾತಾದ 8 ವಿದ್ಯಾರ್ಥಿಗಳು ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಗೆ ಮೊರಾರ್ಜಿ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದ್ದು, ಉನ್ನತ ಭವಿಷ್ಯಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬುನಾದಿ ಹಾಕುವ ನಿಟ್ಟಿನಲ್ಲಿ ಬಾಲ್ಯದಲ್ಲೇ ತಯಾರಿ ನಡೆಸುವ ಸಲುವಾಗಿ ವಿ. ಅಕಾಡೆಮಿಯು ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಿ ತಯಾರಿ ನಡೆಸಿದ ವಿದ್ಯಾರ್ಥಿಗಳಲ್ಲಿ, ಇದೀಗ ಮೊರಾರ್ಜಿ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ,ಕಳೆದ ವಾರವಷ್ಟೆ ನವೋದಯ ಮತ್ತು ಸೈನಿಕ ಶಾಲಾ ಪ್ರವೇಶಾತಿ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಗಮನಿಸಬಹುದಾದ ಅಂಶವಾಗಿದ್ದು, ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ 12ಕ್ಕೆ ಏರಿದ್ದು ಇನ್ನೂ ಕೆಲವು ಸುತ್ತಿನ ಫಲಿತಾಂಶ ಬಾಕಿ ಇದ್ದು ಇನ್ನಷ್ಟು ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಇವರು ವಿದ್ಯಾಮಾತಾ ಅಕಾಡೆಮಿಯ ಸಾಧಕರು:
ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಬಂಗಾರಡ್ಕ ಮನೆ ನಿವಾಸಿ ಗಾಂಧಿ ಪ್ರಸಾದ್ ಬಿ ಎಂ ಮತ್ತು ತುಳಸಿ ದಂಪತಿಗಳ ಪುತ್ರಿ ಹಿಮಾನಿ ಗಾಂಧಿ, ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಅಂಬೆಕಲ್ಲು ಮನೆ ನಿವಾಸಿಗಳಾದ ಅರುಣ್ ಕುಮಾರ್ ಮತ್ತು ಭವ್ಯ ದಂಪತಿಗಳ ಪುತ್ರಿ ಪೂರ್ವಿ ಅಂಬೆಕಲ್ಲು, ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ನಿಡ್ಯಮಲೆ ಮನೆ ನಿವಾಸಿಗಳಾದ ಯತೀಶ ಎನ್ ಎಂ ಮತ್ತು ಉಷಾ ದಂಪತಿಗಳ ಪುತ್ರಿ ನಿಶಾ ಎನ್ ವೈ, ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂದಾಲ್ ಪಾಡಿ ಮನೆ ನಿವಾಸಿಗಳಾದ ಹರಿಪ್ರಸಾದ್ ಪಿ ಬಿ ಮತ್ತು ಮಮತಾ ದಂಪತಿಗಳ ಪುತ್ರಿ ಲಿಶಾ ಪಿ ಎಚ್, ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ಮನೆ ನಿವಾಸಿಗಳಾದ ಜಯಪ್ರಕಾಶ್ ಬಿ ಮತ್ತು ಚೈತ್ರ ದಂಪತಿಗಳ ಪುತ್ರಿ ಹಿತಾ ಬಿ,ಕಡಬ ತಾಲೂಕು ಸಿರಿಬಾಗಿಲು ಗುಂಡ್ಯ, ಅನಿಲ ಮನೆ ನಿವಾಸಿಗಳಾದ ಪದ್ಮನಾಭ ಎ ಮತ್ತು ಶ್ಯಾಮಲಾ ದಂಪತಿಗಳ ಪುತ್ರ ಯಶ್ವಿನ್ ಎ, ಕಡಬ ತಾಲೂಕು ಕುದ್ಮಾರು ಗ್ರಾಮದ ಪಟ್ಟೆ ಮನೆ ನಿವಾಸಿಗಳಾದ ಬಾಲಪ್ಪ ಗೌಡ ಮತ್ತು ನಿಶ್ಮಿತಾ ದಂಪತಿಗಳ ಪುತ್ರ ಹನಿತ್ ಕುಮಾರ್, ಕಡಬ ತಾಲೂಕು ಚಾರ್ವಾಕದ ದೇವರಗುಡ್ಡೆ ಮನೆ ನಿವಾಸಿಗಳಾದ ಡಿ ಜಿ ರವಿರಾಜ್ ಮತ್ತು ರಶ್ಮಿ ಕೆ ದಂಪತಿಗಳ ಪುತ್ರ ತನುಷ್ ರಾಜ್ ತೇಜಸ್ವಿರವರು ಮೊರಾರ್ಜಿ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಹೆಮ್ಮೆಯ ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ಈ ಸಾಧನೆಯು ಇನ್ನಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು ಇನ್ನೂ ಹಲವಾರು ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲು ಸಂಸ್ಥೆಗೆ ಸ್ಫೂರ್ತಿಯಾಗಿದೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಶ್ರೀ ಭಾಗ್ಯೇಶ್ ರೈ ರವರು ಸಂತಸವನ್ನು ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಮಾತಾ ಅಕಾಡೆಮಿ ಇದರ ಆಡಳಿತ ಮಂಡಳಿ , ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

LEAVE A REPLY

Please enter your comment!
Please enter your name here