ನಿಡ್ಪಳ್ಳಿ: ನೀರಿನ ಪೈಪು ಅಳವಡಿಕೆ ಕಾಮಗಾರಿಯಿಂದ ರಸ್ತೆಗೆ ಹಾನಿ

0

ನಿಡ್ಪಳ್ಳಿ; ಬಹುಗ್ರಾಮ ಕುಡಿಯುವ ನೀರಿನ ಪೈಪು ಅಳವಡಿಕೆ ಕಾಮಗಾರಿಯಿಂದ ಡಾಮರ್ ರಸ್ತೆಗೆ ಹಾನಿಯಾದ ಘಟನೆ ಚೂರಿಪದವು ಎಂಬಲ್ಲಿ ನಡೆದಿದೆ.

ರೆಂಜ ಚೂರಿಪದವು ರಸ್ತೆ ಬದಿಯ ಚರಂಡಿಯಲ್ಲಿ ಅಗೆದು ಪೈಪು ಅಳವಡಿಸಿದ ಕಾರಣ ನೀರು ಹರಿದು ರಸ್ತೆ ಬದಿ ಮಣ್ಣು ನೀರಿನಲ್ಲಿ ಕೊಚ್ಚಿ ಹೋದ ಕಾರಣ ರಸ್ತೆಗೆ ಹಾನಿಯಾಗಿದೆ. ಅಳವಡಿಸಿದ ಪೈಪು ಹೊರಗೆ ಕಾಣುತ್ತಿದ್ದು ಇನ್ನೂ ನೀರು ಹರಿದರೆ ಇನ್ನಷ್ಟು ರಸ್ತೆ ನಾಶವಾಗುವ ಸಂಭವ ಇದೆ. ಹೆಚ್ಚಿನ ಕಡೆ ನೀರು ಹರಿಯುವ ಚರಂಡಿಯಲ್ಲೆ ಅಗೆದು ಪೈಪು ಅಳವಡಿಸಿದ್ದು ರಸ್ತೆಗಳಿಗೆ ತೀವ್ರ ಹಾನಿ ಉಂಟಾಗುವ ಸಂಭವ ಇದೆ.

LEAVE A REPLY

Please enter your comment!
Please enter your name here