ಪೆರಾಬೆ: ಗ್ರಾ.ಪಂ.ನ 2 ಲಕ್ಷ ರೂ.ಅನುದಾನದಲ್ಲಿ ಮಾಪಲ-ಬೊಳ್ತಿಮಾರು-ಪುಳಿತ್ತಡಿ ಸಂಪರ್ಕಿಸುವ ರಸ್ತೆಯಲ್ಲಿ ನಡೆದ ಕಾಂಕ್ರಿಟೀಕರಣ ಕಾಮಗಾರಿ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಪೆರಾಬೆ ಗ್ರಾ.ಪಂ.ನ ಕುಂತೂರು 1ನೇ ವಾರ್ಡ್ನ ಸದಸ್ಯರಾದ ಚಂದ್ರಶೇಖರ ರೈ, ಕುಮಾರ ಬಿ.ಕೆ., ಮಮತಾ ಶೆಟ್ಟಿ ಅಂಬರ್ಜೆ ಅವರ ಮುತುವರ್ಜಿಯಿಂದ ಅನುದಾನ ಮಂಜೂರು ಆಗಿತ್ತು. ಉದ್ಘಾಟನೆ ಸಂದರ್ಭದಲ್ಲಿ ಸದ್ರಿ ರಸ್ತೆಯಲ್ಲಿ ಗ್ರಾಮಸ್ಥರು ಶ್ರಮದಾನ ಮಾಡಿ ರಸ್ತೆ ದುರಸ್ತಿಗೊಳಿಸಿದರು. ಸದ್ರಿ ರಸ್ತೆಯ ಕಾಂಕ್ರೀಟೀಕರಣಕ್ಕೆ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು.
ಇದೀಗ ಗ್ರಾ.ಪಂ.ನ 2 ಲಕ್ಷ ರೂ.ಅನುದಾನದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆದಿದ್ದು ಉಳಿದ ಭಾಗದಲ್ಲಿ ಕಾಂಕ್ರಿಟೀಕರಣಕ್ಕೆ ಶಾಸಕರು ಹೆಚ್ಚಿನ ಅನುದಾನ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
