ನಿಡ್ಪಳ್ಳಿ: ಸಿಡಿಲು ಬಡಿದು ಮನೆಗೆ ಹಾನಿ

0

ನಿಡ್ಪಳ್ಳಿ: ಇಲ್ಲಿಯ ಕುಕ್ಕುಪುಣಿ ಬಳಿ ಪಟ್ಟೆ ರಾಮಣ್ಣ ಪೂಜಾರಿ ಎಂಬವರ ಮನೆ ಹಿಂಬದಿ ಸ್ನಾನ ಗೃಹಕ್ಕೆ ಜೂ.11ರಂದು ಮಧ್ಯಾಹ್ನ ಸಮಯ ಸಿಡಿಲು ಬಡಿದ ಘಟನೆ ಸಂಭವಿಸಿದೆ.

ಸಿಡಿಲು ಬಡಿದ ಪರಿಣಾಮ ಸ್ನಾನ ಗೃಹದ ಮಾಡಿನ ಶೀಟ್ ಸಂಪೂರ್ಣ ಹಾನಿಯಾಗಿದ್ದು, ಪಾತ್ರೆಗಳಿಗೂ ಹಾನಿಯಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಯರಿಂಗ್, ಸ್ವಿಚ್ ಬೋರ್ಡ್ ಗಳಿಗೂ ಸಂಪೂರ್ಣ ಹಾನಿ ಸಂಭವಿಸಿದೆ. ಮನೆ ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸಿಡಿಲಿನ ಅಘಾತಕ್ಕೆ ಇಲ್ಲಿಯ ಸುತ್ತಮುತ್ತಲಿನ ಕೆಲವರ ಪಂಪು ಶೆಡ್ ವಯರಿಂಗ್ ಕೂಡ ಸುಟ್ಟು ಹೋಗಿದೆ.

ಗ್ರಾಮ ಪಂಚಾಯತ್ ಪಿಡಿಒ ಸಂಧ್ಯಾಲಕ್ಷ್ಮೀ, ಕಾರ್ಯದರ್ಶಿ ಶಿವರಾಮ, ಪಂಚಾಯತ್ ಸದಸ್ಯರಾದ ಅವಿನಾಶ್ ರೈ, ತುಳಸಿ, ಸಿಬ್ಬಂದಿಗಳಾದ ವಿನೀತ್ ಕುಮಾರ್, ಜಯಕುಮಾರಿ, ಗ್ರಾಮ ಆಡಳಿತ ಅಧಿಕಾರಿ ಕಚೇರಿ ಸಹಾಯಕಿ ಜಯಶ್ರೀ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here