ಕಾಣಿಯೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೋಳ್ಪಾಡಿ ಇಲ್ಲಿನ ಶಾಲಾ ಮಂತ್ರಿ ಮಂಡಲ ರಚನೆಯು ಇ. ವಿ.ಎಮ್ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಶಾಲಾ ನಾಯಕನಾಗಿ ಭವಿತ್. ಕೆ ಹಾಗೂ ಉಪನಾಯಕನಾಗಿ ಅನುಷ್. ಕೆ ಆಯ್ಕೆಯಾದರು.
ಶಿಕ್ಷಣ ಮಂತ್ರಿ ಜನನಿ, ಅರೋಗ್ಯ ಮಂತ್ರಿ ಗ್ರೀಷ್ಮ ,ಆಹಾರ ಮಂತ್ರಿ ಜಾಹ್ನವಿ, ಸಾಂಸ್ಕೃತಿಕ ಮಂತ್ರಿ ಪಾರ್ಥ ವಿ. ರೈ, ಕ್ರೀಡಾ ಮಂತ್ರಿ ವರ್ಷಿತ್, ರಕ್ಷಣಾ ಮಂತ್ರಿ ಸಾನಿಧ್ಯ, ನೀರಾವರಿ ಮಂತ್ರಿ ಧವನ್, ವಾರ್ತಾ ಮಂತ್ರಿ ಧನ್ಯ, ಸ್ವಚ್ಛತಾ ಮಂತ್ರಿ ಸಾನ್ವಿ, ಕಾನೂನು ಮಂತ್ರಿ ಲಕ್ಷ್ಯ, ಗ್ರಂಥಾಲಯ ಮಂತ್ರಿ ಪೌಶಿ, ತೋಟಗಾರಿಕ ಮಂತ್ರಿ ಜಿತೇಶ್, ವಿರೋಧ ಪಕ್ಷದ ನಾಯಕಿ ಅಕ್ಷತಾ, ಗೃಹ ಮಂತ್ರಿ ಶರಣ್ಯ ಆಯ್ಕೆಯಾದರು. ಶಿಕ್ಷಕರು ಚುನಾವಣಾ ಪ್ರಕ್ರಿಯೆ ನಡೆಸಿದರು. ಶಾಲಾ ಮುಖ್ಯಗುರು ಜಯಣ್ಣ. ಎಸ್ ಪ್ರಮಾಣ ವಚನ ಬೋಧಿಸಿದರು.