ಬಡಗನ್ನೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬ ಪುಟ್ಟ ಹಳ್ಳಿಯಲ್ಲಿರುವ ಕಳೆದ ಸಾಲಿನಲ್ಲಿ ಹಸಿರು ಅಭ್ಯುದಯ ಪ್ರಶಸ್ತಿ ವಿಜೇತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ. ಈ ಶಾಲೆಗೆ ಸೇರುವ ವಿಧ್ಯಾರ್ಥಿಗಳ ಸೌಭಾಗ್ಯವೆಂದರೆ ಸರ್ಕಾರದಿಂದ ಸಿಗುವ ಸವಲತ್ತುಗಳ ಜೊತೆಗೆ ಊರಿನ ದಾನಿಗಳು, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ನೋಟ್ ಪುಸ್ತಕ, ಬ್ಯಾಗ್, ಊಟದ ತಟ್ಟೆ , ಲೋಟ, ಕುಡಿಯುವ ನೀರಿನ ಬಾಟಲ್ ಹೀಗೆ ಎಲ್ಲವೂ ಉಚಿತವಾಗಿ ವಿತರಿಸಲಾಗುತ್ತದೆ.
2025 – 26 ನೇ ಸಾಲಿನ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಮೋಹನ್ ನಾಯ್ಕ ಮುಂಡೋವುಮೂಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದಾನಿಗಳಾದ ಸಂದೀಪ್ ರೈ ಚಿಲ್ಮೆತ್ತಾರು , ಜಯಂತಿ ರೈ ನಾಯಿಲ ಹೊಸಮನೆ , ಒಳಮೊಗ್ರು ಗ್ರಾ. ಪಂ ಸದಸ್ಯ ಮಹೇಶ್ ಕೇರಿ , ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಜ್ಯೋತಿ ಕಳೆಂಜಿಲ , ಶಾಲಾ ಮುಖ್ಯಗುರು ಚಿತ್ರಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾನಿಗಳಿಗೆ ಕೃತಜ್ಞತೆ
ಒಳಮೂಗ್ರು ಗ್ರಾ. ಪಂ ಸದಸ್ಯ ಮಹೇಶ್ ಕೇರಿ ರವರು ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿದ ಸರಕಾರಿ ಶಾಲೆಗಳೆಂದರೆ ಇವತ್ತು ಯಾರಿಗೂ ಬೇಡ. ಇಂತಹ ಸಂದರ್ಭದಲ್ಲೂ ನಮ್ಮ ಶಾಲೆಯಲ್ಲಿ 80 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ನೀಡಲು ಸಹಕಾರ ನೀಡಿದ ಎಲ್ಲಾ ದಾನಿಗಳಿಗೆ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ ಎಂದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು , ಅತಿಥಿ ಶಿಕ್ಷಕಿ ಲಕ್ಷ್ಮೀ ಸ್ವಾಗತಿಸಿದರು , ಮುಖ್ಯ ಶಿಕ್ಷಕಿ ಚಿತ್ರ ರೈ ರವರು ಪ್ರಾಸ್ತಾವಿಕವಾಗಿ ಮಾತನಾಡಿ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು , ಸಹಶಿಕ್ಷಕ ಪ್ರೀತಂ ವಂದಿಸಿದರು. ಗೌರವ ಶಿಕ್ಷಕ ವಿಪಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.