ಪುತ್ತೂರು: ದ. ಕ ಜಿಲ್ಲಾ ಕೃಷಿಕಸಮಾಜದ ಕಾರ್ಯಕಾರಿ ಸಮಿತಿ ಸಭೆ ಜೂನ್ 13 ರಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಂಗಳೂರು ಇಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ರೈ ಕೊರಂಗ ವಹಿಸಿದ್ದರು. ಸಭೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಭತ್ತ ಬೆಳೆಯುವ ರೈತರಿಗೆ ಕೇರಳ ಮಾದರಿಯಲ್ಲಿ ಪ್ರತಿ ಎಕರೆಗೆ 10,000 ಪ್ರೋತ್ಸಾಹ ಧನವನ್ನು ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಲಾಯಿತು. ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ನೀಡುವ ಸೋಲಾರ್ ಪಂಪು ಗಳನ್ನು ಪ್ರತಿ ತಾಲೂಕಿಗೆ ಕನಿಷ್ಠ 25 ಘಟಕಗಳನ್ನು ನೀಡುವಂತೆ ನಿರ್ಣಯಿಸಲಾಯಿತು. ಸರಕಾರದ ಆದೇಶದಂತೆ ತಾಲೂಕು ಕೃಷಿಕ ಸಮಾಜಗಳಿಗೆ ಎಪಿಎಂಸಿ ಪ್ರಾಂಗಣದಲ್ಲಿ ನಿವೇಶನ ನೀಡುವ ಬಗ್ಗೆ ಚರ್ಚಿಸಲಾಯಿತು. ರೈತರಿಗೆ ಇತ್ತೀಚೆಗೆ ಕಾಡುಪ್ರಾಣಿಗಳಿಂದ ತೊಂದರೆಗೊಳಗಾಗಿದ್ದು ಬೆಲೆ ಹಾನಿ ಬಗ್ಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಸರಕಾರಕ್ಕೆ ಕೇಳಿಕೊಳ್ಳಲಾಯಿತು.
ತೋಟಗಾರಿಕಾ ಇಲಾಖೆ, ಪಶು ಸಂಗೋಪನ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಇದರ ಅಧಿಕಾರಿಗಳು ಇಲಾಖ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಚಂದ್ರ ಕೊಲ್ಚಾರ್, ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕೋಶಾಧಿಕಾರಿ ಎ ಟಿ ಕುಸುಮಾಧರ ಸುಳ್ಯ, ಸದಸ್ಯರಾದ ಸಂಪತ್ ಸಾಮ್ರಾಜ್ಯ ಮೂಡಬಿದ್ರೆ, ಮಹಾವೀರ ಜೈನ ಬೆಳ್ತಂಗಡಿ, ರಾಜು ಪೂಜಾರಿ ಬೆಳ್ತಂಗಡಿ, ಇಸ್ಮಾಯಿಲ್ ಮೀನ ಕೋಡಿ, ಪದ್ಮರಾಜ್ ಬಲ್ಲಾಲ್ ಬಂಟ್ವಾಳ, ಮಹೇಶ್ ಕೆ ಪುಂಚಪಾಡಿ ಕಡಬ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೌಡ ಸ್ವಾಗತಿಸಿ ವಂದಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಮನೋಹರ ರೈ ಸುಜಾತ ಸಹಕರಿಸಿದರು.