ನಾಳೆ (ಜೂ.18)ಕ್ಕೆ ಭಾ. ಕೃ. ಸಂ. ಪ. – ಗೇರು ಸಂಶೋಧನಾ ನಿರ್ದೇಶನಾಲಯ 40ನೇ ಸಂಸ್ಥಾಪನಾ ದಿನಾಚರಣೆ

0


ಪುತ್ತೂರು: ಭಾರತೀಯ ಕೃಷಿ ಪರಿಷತ್‌ನ (ಐಸಿಎಆರ್) ಅಡಿಯಲ್ಲಿ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ 40ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭವನ್ನು ಜೂ 18 ರಂದು ಬೆಳಿಗ್ಗೆ ಗಂಟೆ 10:30ಕ್ಕೆ ಮೊಟ್ಟೆತ್ತಡ್ಕದಲ್ಲಿ ಆಯೋಜಿಸಲಾಗಿದೆ.


ಕೃಷಿ ವಿಜ್ಞಾನಿಗಳ ನೇಮಕಾತಿ ಸಂಸ್ಥೆ, ನವದೆಹಲಿಯ(ಎಎಸ್‌ಆರ್‌ಬಿ) ಅಧ್ಯಕ್ಷ ಡಾ. ಸಂಜಯ್ ಕುಮಾರ್ ಅವರು ಸುಸ್ಥಿರ ಜೈವಿಕ ಆರ್ಥಿಕತೆಗೆ ತೊಟಗಾರಿಕೆ ವಿಷಯದಲ್ಲಿ ನಾವಿನ್ಯತೆ ಮತ್ತು ಉದಯೋನ್ಮುಖ ಅವಕಾಶಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈದರಾಬಾದಿನ ಭಾರತೀಯ ಎಣ್ಣೆಕಾಳು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಆರ್. ಕೆ. ಮಾಥುರ್ ಮತ್ತು ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅವರು ಭಾಗವಹಿಸಲಿದ್ದಾರೆ.

ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಉಪನ್ಯಾಸ, ಶ್ರೇಷ್ಠ ಸಂಶೋಧನಾ ಪ್ರಬಂಧ ಪ್ರಶಸ್ತಿ ಪ್ರದಾನ, ಪ್ರಕಟಣೆ ಹಾಗೂ ತಂತ್ರಜ್ಞಾನ ಪರವಾನಗಿ ಬಿಡುಗಡೆ, ಪರಿಶಿಷ್ಟ ಪಂಗಡ ಉಪ ಯೋಜನೆ ಯೋಜನೆಯಡಿ ರೈತರಿಗೆ ಸಾಮಗ್ರಿಗಳ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ. ಹಣ್ಣು ಮತ್ತು ತೋಟದ ಬೆಳೆಗಳ ಕುರಿತು ಸಹಾಯಕ ಮಹಾನಿರ್ದೇಶಕ ಡಾ. ವಿ.ಬಿ ಪಟೇಲ್ ಹಾಗು ತೋಟಗಾರಿಕೆಯ ಉಪ ಮಹಾನಿರ್ದೇಶಕ ಡಾ.ಎಸ್.ಕೆ.ಸಿಂಗ್ ಅವರು ವರ್ಚುವಲ್ ಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here