ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣಾ ಪ್ರಕ್ರಿಯೆ ನಡೆಯಿತು.
ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಸಾಮಾನ್ಯ ಪ್ರಜ್ಞೆಯನ್ನು ಮೂಡಿಸುವ ನೆಲೆಯಲ್ಲಿ ಇ.ವಿ.ಎಂ ಮತಯಂತ್ರದ ಮೂಲಕ ೨೦೨೫-೨೬ನೇ ಸಾಲಿನ ಚುನಾವಣೆಯನ್ನು ನಡೆಸಲಾಯಿತು
ಪ್ರೌಢಶಾಲಾ ವಿಭಾಗದ ನಾಯಕನಾಗಿ ಕಿಶನ್ ಬಂಗೇರ ಮತ್ತು ಉಪನಾಯಕಿಯಾಗಿ ಜಿ.ಎಂ. ಕೀರ್ತಿ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಜಾನ್ವಿ ಮತ್ತು ಉಪನಾಯಕನಾಗಿ ಸೃಜನ್ ಕುಮಾರ್ ಆಯ್ಕೆಯಾದರು. ಶಿಕ್ಷಕರಾದ ಚಂದ್ರಶೇಖರ್, ರಾಜೇಶ್, ಹರಿಣಾಕ್ಷಿ ಮತ್ತು ರುಕ್ಮಯ ಇವರು ಸಂಯೋಜಕತ್ವದಲ್ಲಿ ಸಹಕರಿಸಿದರು.