ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲು ಇಂಜಿನಿಯರ್ ಗೆ ಸೂಚನೆ
ಆಲಂಕಾರು: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ರಾಮಕುಂಜ ಗ್ರಾಮದ ನೇಲಡ್ಕದ ಹೊಳೆಗೆ ಬೃಹತ್ ಗಾತ್ರದ ಆಲದ ಮರ ಬಿದ್ದು ಹೊಳೆಯಲ್ಲಿ ಹರಿಯುತ್ತಿರುವ ನೀರು ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಯಾದ ಪ್ರದೇಶವನ್ನು ವೀಕ್ಷಿಸಿ, ಕಿರು ಸೇತುವೆಗೆ ಹಾನಿಯಾದ ಪ್ರದೇಶವನ್ನು ವೀಕ್ಷಿಸಿ ನಂತರ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರವರಿಗೆ ಅಂದಾಜು ಪಟ್ಟಿ ತಯಾರಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಮಕುಂಜ ಗ್ರಾ.ಪಂ ಅಧ್ಯಕ್ಷರಾದ ಸುಚೇತಾ, ಉಪಾಧ್ಯಕ್ಷರಾದ ಕೇಶವ ಗಾಂಧಿಪೇಟೆ,ಪಂಚಾಯತ್ ಸದಸ್ಯರಾದ ಪ್ರಶಾಂತ್ ಅರ್.ಕೆ,ಪ್ರದೀಪ್ ಬಾಂತೋಟ್ಟು,ಸುಳ್ಯಮಂಡಲ ಬಿ.ಜೆ.ಪಿ ಪ್ರದಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಪ್ರಮುಖರಾದ ಕೃಷ್ಣ ಎಂ.ಆರ್,ಶಿವಪ್ರಸಾದ್ ರೈ ಮೈಲಾರಿ,ಲಕ್ಷ್ಮೀ ನಾರಾಯಣ ರಾವ್ ಆತೂರು,ಸದಾಶಿವ ಶೆಟ್ಟಿ ಮಾರಂಗ, ಮುತ್ತಪ್ಪ ಗೌಡ ನೇಲಡ್ಕ,ಬಾಬು ಶೆಟ್ಟಿ ನೇಲಡ್ಕ,ಸುಬ್ಬಣ್ಣ ಶೆಟ್ಟಿ ನೇಲಡ್ಕ,ಕರಿಯ ಗಾಣಂತಿ,ಜಗದೀಶ ಕೊಂಡಪ್ಪಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.