ಪುತ್ತೂರು: ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ 40ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ ಕಾರ್ಯಕ್ರಮ ನಡೆಯಿತು. ವಿಗ್ರಹ ಶಿಲ್ಪಿ ತಾರಾನಾಥ ಪರ್ಲಡ್ಕ ಪೂಜಾ ವಿಧಿವಿಧಾನ ನಡೆಸಿ ಮುಹೂರ್ತ ನೆರವೇರಿಸಿದರು.
ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ್ ರೈ ಚೆಲ್ಯಡ್ಕ, ಅಧ್ಯಕ್ಷ ಶರತ್ ಕುಮಾರ್ ಪಾರ, ಪ್ರಧಾನ ಕಾರ್ಯದರ್ಶಿ ಗಣೇಶ್ ಹೊಳ್ಳ, ಕೋಶಾಧಿಕಾರಿ ಉಚಿತ್ ಕುಮಾರ್ ಬದಿನಾರು, ಸದಸ್ಯರುಗಳಾದ ಸತೀಶ್ ರೈ ಮೂರ್ಕಾಜೆ, ಶೀನಪ್ಪ ಪೂಜಾರಿ ಬೆದ್ರಾಡಿ, ಸತೀಶ್ ಗೌಡ ಪಾರ, ಶಿವಪ್ರಸಾದ್ ತಲೆಪ್ಪಾಡಿ, ಜಯರಾಮ ರೈ ಮೂರ್ಕಾಜೆ, ರವಿರಾಜ್ ಅಮೀನ್ ಬೆದ್ರಾಡಿ, ಪ್ರವೀಣ್ ಕರ್ನಪ್ಪಾಡಿ, ರಂಜಿತ್ ತಲೆಪ್ಪಾಡಿ, ನಾಗೇಶ್ ಕಜೆ ಉಪಸ್ಥಿತರಿದ್ದರು.