ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಕಡಬ ಶಾಖೆಯ ಶುಭಾರಂಭ

0

ಕಡಬ: ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಇದರ ಸುಬ್ರಹ್ಮಣ್ಯ ಶಾಖೆಯು ಸ್ಥಳಾಂತರಗೊಂಡು, ಕಡಬ ಶ್ರೀರಾಮ ಟವರ್ಸ್‌ನಲ್ಲಿ ಜೂನ್ .15ರಂದು ಶುಭಾರಂಭಗೊಂಡಿದೆ.


ಶಾಖಾ ಕಛೇರಿಯಲ್ಲಿ ಬೆಳಗ್ಗೆ ಗಣಪತಿ ಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಯಶೋಧ ಟವರ್ಸ್ ಮಾಲಕ ಅಚ್ಯುತ ಪ್ರಭು ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಗಣಪತಿ ಭಟ್, ಕೆನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ರಾಮ ಭಟ್, ಕಡಬ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ,ಕಟ್ಟಡದ ಮಾಲಕ ಶಿವರಾಮ ಶೆಟ್ಟಿ, ಹಾಗೂ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ಕಲ್ಪುರೆ ಸ್ಥಳಾಂತರಗೊಂಡ ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ ಕೆ. ಇವರು ಮಾತನಾಡಿ, ಸಂಘವು ವಿಟ್ಲ, ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಮೂಡಬಿದ್ರೆ, ಸುಳ್ಯ, ಮೂಲ್ಕಿ, ಮಂಗಳೂರು ಮತ್ತು ಕಡಬ ಸೇರಿ ಒಟ್ಟು 9 ಶಾಖೆಗಳನ್ನು ಹೊಂದಿದ್ದು ಸಂಘವು 215 ಕೋಟಿ ಠೇವಣಿ ,196 ಕೋಟಿ ಸಾಲ ವಿತರಣೆ ಮಾಡಿದ್ದು 2024-25 ರ ಸಾಲಿನಲ್ಲಿ ಅಂದಾಜು 2.13 ಕೋಟಿ ಲಾಭ ಗಳಿಸಿದೆ. ಒಟ್ಟು 630 ಕೋಟಿ ವ್ಯವಹಾರ ಮಾಡುವ ಮೂಲಕ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದು, ಸದಸ್ಯರಿಗೆ ನೆಫ್ಟ್ ಸೌಲಭ್ಯ, ಠೇವಣಿಗೆ ಹೆಚ್ಚಿನ ಬಡ್ಡಿ ದರ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿರುವ ಕುರಿತು ಮಾಹಿತಿಯನ್ನು ನೀಡಿದರು.

ಸಂಘದ ನಿರ್ದೇಶಕರಾದ ರಾಜೇಂದ್ರ ರೈ ಪಿ. ಕಾರ್ಯಕ್ರಮವನ್ನು ನಿರೂಪಿಸಿ ಸಂಘದ ಉಪಾಧ್ಯಕ್ಷರಾದ ನವೀನ್ ಪಿ.ಎಸ್. ವಂದಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಉಮಾನಾಥ ರೈ ಎಂ. ಲಕ್ಷ್ಮೀಕಾಂತ್ ಬೇಕಲ್, ಸಂದೇಶ್ ಎಂ.ಎಸ್. ಭಾರತಿ, ಅನಿತಾ ಮಿನೆಜಸ್, ಶಿವಕುಮಾರ್ ಎಂ.ಜಿ. ಅಖಿಲ ಶೆಟ್ಟಿ ಕೆ, ಶೀನಪ್ಪ ಎನ್. ರವಿ ನಾಯ್ಕ ಐ. ಮತ್ತು ಮಾಜಿ ನಿರ್ದೇಶಕರುಗಳು, ಸ್ಥಳೀಯ ಶಿಕ್ಷಕ ಬಂಧುಗಳು, ಸಂಘದ ಜನರಲ್ ಮೆನೇಜರ್ ಸುಚಿನ್ ರಾಜ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here