ಪುತ್ತೂರಿನ ಪ್ರತಿಷ್ಟಿತ ಹೊಟೇಲ್ ನಲ್ಲಿ ಕಡ್ಲೆ ಅವಲಕ್ಕಿ ರುಚಿ ಸವಿದ ಜಿಲ್ಲಾ ಉಸ್ತುವಾರಿ ಸಚಿವರು

0


ಪುತ್ತೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜೂ.18 ರಂದು ಬೆಳ್ಳಬೆಳಗ್ಗೆ ಪುತ್ತೂರು ನೆಹರುನಗರದಲ್ಲಿರುವ ಪ್ರತಿಷ್ಠಿತ ಹೊಟೇಲ್ ಮಹೇಶ್ ಪ್ರಸಾದ್ ನಲ್ಲಿ ಸಿಂಪಲ್ ಆಗಿ ಪುತ್ತೂರಿನ ಕಡ್ಲೆ ಅವಲಕ್ಕಿ ರುಚಿ ಸವಿದರು.


ಅವರು ಸುಳ್ಯ ಮತ್ತು ಪುತ್ತೂರಿನಲ್ಲಿನ ಹಲವು ಕಾರ್ಯಕ್ರಮಗಳಿಗೆ ಭಾಗಿಯಾಗುವ ಹಿನ್ನಲೆಯಲ್ಲಿ ಆಗಮಿಸುತ್ತಿದ್ದ ವೇಳೆ ಪುತ್ತೂರಿನ ನೆಹರುನಗರದಲ್ಲಿರುವ ಪ್ರತಿಷ್ಡಿತ ಹೊಟೇಲ್ ಮಹೇಶ್ ಪ್ರಸಾದ್ ನಲ್ಲಿ ಬೆಳಗ್ಗಿನ ಉಪಹಾರ ಮಾಡಿದರು. ಪುತ್ತೂರಿನ ಕಡ್ಲೆ ಅವಲಕ್ಕಿ ಮತ್ತು ಬನ್ಸ್ ರುಚಿಯನ್ನು ಸವಿದರು. ಈ ಸಂದರ್ಭ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಜೊತೆಗಿದ್ದರು.

LEAVE A REPLY

Please enter your comment!
Please enter your name here