
ಪುತ್ತೂರು: ಬುಧವಾರದಂದು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ನಿಧನರಾಗಿದ್ದು ಇಬ್ಬರ ಅಂತ್ಯಕ್ರಿಯೆಯು ಕಾಂಗ್ರೆಸ್ ಸೇವಾ ಹಸ್ತನಿಧಿಯ ಮೂಲಕ ನಡೆದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸುರೇಶ್ ಸಾಲಿಯಾನ್ ಮತ್ತು ಬೆಟ್ಟಂಪಾಡಿಯ ಕಾಂಗ್ರೆಸ್ ಕಾರ್ಯಕರ್ತ ಕೃಷ್ಣಪ್ಪ ಅವರು ನಿಧನರಾದವರು. ಕಳೆದ ವಾರ ಈ ಸೇವಾ ನಿಧಿಯನ್ನು ಆರಂಭಿಸಲಾಗಿದ್ದು, ಬಡ ಕಾರ್ಯಕರ್ತರಿಗೆ ನೆರವು ನೀಡುವುದು ಮತ್ತು ಸಂಕಷ್ಟದ ಸಮಯದಲ್ಲಿ ನೆರವು ನೀಡುವುದು ಸಹಾಯ ನಿಧಿಯ ಉದ್ದೇಶವಾಗಿದೆ ಎಂದು ಆಳ್ವರವರು ತಿಳಿಸಿದ್ದಾರೆ.