ಪುತ್ತೂರು, ಕಡಬ ತಾ| ವಿಕಲ ಚೇತನರ ಉದ್ಯೋಗ ಮೇಳ

0

ಪುತ್ತೂರು: apd ಸಂಸ್ಥೆ ಮಂಗಳೂರು ಮತ್ತು ಪುತ್ತೂರು ತಾಲೂಕು ಪಂಚಾಯತ್ ವಿಕಲ ಚೇತನರ ಇಲಾಖೆ ಸಹಕಾರದಲ್ಲಿ ವಿಕಲ ಚೇತನರ ಉದ್ಯೋಗ ಮೇಳ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ನಗರಸಭೆಯ ಪೌರಾಯುಕ್ತ ಮಧುಮನೋಹರ್ ಎಸ್. ದೀಪ ಬೆಳಗಿಸಿ apd (ಎಪಿಡಿ) ಸಂಸ್ಥೆಯ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದರು. ಪುತ್ತೂರು ತಾಲೂಕು ಪಂಚಾಯತ್ ವ್ಯವಸ್ಥಾಪಕ ಜಯಪ್ರಕಾಶ್, ಪುತ್ತೂರು ಮೀನುಗಾರಿಕೆ ಇಲಾಖೆಯ ಮಂಜುಳಾ, ಮಂಗಳೂರು (apd)ಎಪಿಡಿ ಸಂಸ್ಥೆಯ ವ್ಯವಸ್ಥಾಪಕ ಶ್ರೀಧರ್, ಪುತ್ತೂರು ತಾಲೂಕು ಪಂಚಾಯತ್ ಬಹುಮಟ್ಟದ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು, ಕಡಬ ತಾಲೂಕಿನ ಸುಮಾರು 40 ಮಂದಿ ವಿದ್ಯಾವಂತ ಅರ್ಹ 18ರಿಂದ 40ವರ್ಷದ ವಿಕಲಚೇತನರ ಯುವಕ/ಯುವತಿಯರು apd ಸಂಸ್ಥೆ ಉದ್ಯೋಗ ಮೇಳದಲ್ಲಿ ನೋಂದಾವಣಿ ಮಾಡಿದ್ದರು. 34ನೆಕ್ಕಿಲಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸೇಸಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಹಾಗೂ ಕಡಬ ತಾಲೂಕು ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here