ಉಪ್ಪಿನಂಗಡಿ: ’ವಿವೇಕಾರುಣ್ಯ ಬುಕ್ಸ್’ ಉದ್ಘಾಟನೆ

0

ಉಪ್ಪಿನಂಗಡಿ: ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳ ಮಾರಾಟ ಮಳಿಗೆ ’ವಿವೇಕಾರುಣ್ಯ ಬುಕ್ಸ್’ ಉಪ್ಪಿನಂಗಡಿ ಹೋಟೆಲ್ ಆದಿತ್ಯ ಬಳಿಯ ಸೂರ್ಯಂಬೈಲು ಸಂಕೀರ್ಣದಲ್ಲಿ ಜೂ.14ರಂದು ಶುಭಾರಂಭಗೊಂಡಿತು.


ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶಂಕರ ನಾರಾಯಣ ಭಟ್ ಬೊಳ್ಳಾವು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತಮ ಧ್ಯೇಯೋದ್ದೇಶವನ್ನು ಹೊಂದಿದಂತಹ ವಿವೇಕಾರುಣ್ಯ ಪುಸ್ತಕ ಮಳಿಗೆಯು ಅತ್ಯುನ್ನತವಾದ ರೀತಿಯಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಮಾಡಲಿ. ಸಮಾಜಕ್ಕೆ ಉತ್ತಮವಾದ ಸೇವೆಯನ್ನು ನೀಡುವುದರ ಮೂಲಕ ಯಶಸ್ಸನ್ನು ಕಾಣುತ್ತಾ ನಿರಂತರ ಅಭಿವೃದ್ಧಿಯನ್ನ ಸಾಧಿಸಲಿ ಎಂದು ಹೇಳಿ ಶುಭಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಭಾರತೀಯ ಸೇನೆಯ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಹಾಗೂ ಉಪ್ಪಿನಂಗಡಿ ಅಮೂಲ್ಯ ಎಚ್.ಪಿ. ಗ್ಯಾಸ್ ಏಜೆನ್ಸಿ ಮಾಲಕರಾದ ಚಂದಪ್ಪ ಮೂಲ್ಯ ಹಾಗೂ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು ಶುಭ ಹಾರೈಸಿದರು. ಮಾಲಕರಾದ ಚೇತನ್ ಎಂ. ಮತ್ತು ಮನೆಯವರು, ಶರಣ್ ರಾಮ್, ಕಟ್ಟಡ ಮಾಲಕರಾದ ಶಾಂತರಾಮ ಭಟ್ ಮತ್ತಿತರರು ಉಪಸ್ಥಿತರಿದ್ದರು. ಚೇತನ್ ಎಂ., ಸ್ವಾಗತಿಸಿ, ವಂದಿಸಿದರು.

ಲೇಖನಿ ಸಾಮಗ್ರಿ, ಪುಸ್ತಕ ಲಭ್ಯ:
ನೂತನ ಪುಸ್ತಕ ಮಾರಾಟ ಮಳಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅವಶ್ಯಕವಾದ ಲೇಖನಿ ಸಾಮಗ್ರಿಗಳು, ವಿವಿಧ ಪುಸ್ತಕಗಳು, ಕಛೇರಿ ಹಾಗೂ ಶಾಲೆಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿದೆ. ವಿದ್ಯಾರ್ಥಿಗಳು, ಗ್ರಾಹಕರು ನಮ್ಮೊಂದಿಗೆ ವ್ಯವಹರಿಸುವ ಮೂಲಕ ಸಹಕಾರ ನೀಡುವಂತೆ ಮಾಲಕರಾದ ಚೇತನ್ ಎಂ.ಅವರು ವಿನಂತಿಸಿದರು.

LEAVE A REPLY

Please enter your comment!
Please enter your name here