ಪುತ್ತೂರು: ಪೆರ್ಣೆ ಶ್ರೀ ವೆಜ್ ರೆಸ್ಟೋರೆಂಟ್ ಜೂ.20ರಂದು ದರ್ಬೆಯಲ್ಲಿರುವ ಪ್ರಶಾಂತ್ ಮಹಾಲ್ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಕಟ್ಟಡ ಮಾಲಕ ಸವಣೂರು ಸೀತರಾಮ ರೈ ಅವರು ದೀಪ ಬೆಳಗಿಸುವುದುರ ಮೂಲಕ ರೆಸ್ಟೋರೆಂಟ್ ಉದ್ಘಾಟಿಸಿದರು. ಈ ವೇಳೆ ವಸಂತ ಜಾಲಾಡಿ, ರಾಮಣ್ಣ ಗೌಡ, ಮೋನಪ್ಪ, ಮಧುಸೂದನ್, ಹರೀಶ್ ಉಪಸ್ಥಿತರಿದ್ದರು. ಅನೇಕ ಗಣ್ಯರು ಆಗಮಿಸಿ ಶುಭಕೋರಿದರು. ಶೋಭಿತಾ, ಪ್ರವೀಣ್ ಹಾಗೂ ರವೀಂದ್ರ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ಸಚಿನ್ ದೇಲಂಪಾಡಿ ಮಾಲಕತ್ವದ ಈ ರೆಸ್ಟೋರೆಂಟ್ನಲ್ಲಿ ಶುದ್ಧ ಸಸ್ಯಹಾರಿ ಊಟ, ಉಪಹಾರ, ಜ್ಯೂಸ್ ಐಟಂ, ಐಸ್ಕ್ರೀಂ ಹಾಗೂ ಚಾಟ್ಸ್ ಇತ್ಯಾದಿ ಖಾದ್ಯಗಳು ಲಭ್ಯವಿದೆ.