
ಪುತ್ತೂರು: ಬೆಳಕು ಸೇವಾ ಟ್ರಸ್ಟ್ ಪುತ್ತೂರು ವತಿಯಿಂದ ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜೂ.17ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಒಂದರಿಂದ ಏಳನೇ ತರಗತಿ ಎಲ್ ಕೆ ಜಿ, ಯು ಕೆ ಜಿ ವಿದ್ಯಾರ್ಥಿಗಳಿಗೆ ಬೆಳಕು ಸೇವಾ ಟ್ರಸ್ಟ್ ಪುತ್ತೂರು ಇವರು ಪುಸ್ತಕ ನೀಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಶೀಲಾವತಿ, ಶತಮಾನೋತ್ಸವ ಸಮಿತಿಯ ಶಾಲಾ ಸಂಚಾಲಕರಾದ ಸೀತಾರಾಮ ರೈ ಚೆಲ್ಯಡ್ಕ, ಚಂದ್ರಹಾಸ ರೈ, ಶಾರದಾ, ಕಿರಣ್ ರೈ ಪುಂಡಿಕಾೖ, ಪ್ರಜ್ವಲ್ ರೈ ತೊಟ್ಲ, ಒಳಮೊಗ್ರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ. ಆರ್ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪುಸ್ತಕ ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು. ದಾನಿಗಳಾದ ಸಂತೋಷ ರೈ ಕೈಕಾರ ಪುಸ್ತಕ ನೀಡಿ ಸಹರಕರಿಸಿದ್ದರು.
ಈ ಸಂದರ್ಭದಲ್ಲಿ ಸಂಯೋಜಕ ನವೀನ ರೈ, ಶಾಲಾ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಶಾಲಾ ಮುಖ್ಯಗುರುಗಳಾದ ರಾಮಣ್ಣ ರೈ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕರುಗಳಾದ ಸುರರಾಜ್, ಶೋಭಾ, ವೇದಾಕ್ಷಿ ಸಹಕರಿಸಿದರು.