ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0


ಪುಣಚ: ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ “ಚೂಡಾಮಣಿ ” ಪ್ರಸಂಗ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಜೂ.20ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಗೋವಿಂದ ನಾಯಕ್ ಪಾಲೆಚ್ಚಾರ್, ಲಕ್ಷ್ಮೀಶ ಬೇಂಗ್ರೋಡಿ, ಚೆಂಡೆ ಡಾI ಶ್ರೀಪ್ರಕಾಶ್ ಬಂಗಾರಡ್ಕ, ಮದ್ದಳೆ ಆದಿತ್ಯ ಬರಕೆರೆ ಪಡ್ರೆ, ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ಜಗದೀಶ ರೈ ಪನಡ್ಕ, ಮಂಜುನಾಥ ಆಚಾರ್ಯ ಪೆರುವಾಯಿ, ಜಗನ್ನಾಥ ಎಸ್, ಪುಣಚ, ವಿಜಯ‌ಮನೋಹರ ನಾಯಕ್ ತೋಟದಮೂಲೆ, ಶಂಕರ್ ಸಾರಡ್ಕ ಸಹಕರಿಸಿದರು.

ಕ್ಷೇತ್ರದಲ್ಲಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ನಡೆಯಿತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here