ಪುತ್ತೂರು: ತಾಲ್ಲೂಕು ಮಹಿಳಾ ಬಂಟರ ವಿಭಾಗದ ಮಾಸಿಕ ಸಭೆಯು ಜೂ.17ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಿತು.
ಪುಲಸ್ಯ ರೈ ಇವರಿಂದ “ಮುದ್ರೆ ಮತ್ತು ಆರೋಗ್ಯ” ಈ ಬಗ್ಗೆ ಮಹಿಳೆಯರಿಗೆ ವಿಶೇಷ ಮಾಹಿತಿ ನೀಡಿ ಇದರ ಪ್ರಯೋಜನಗಳ ಬಗ್ಗೆ ವಿವರಿಸಿದರು. ಪ್ರತಿ ವರ್ಷದಂತೆ “ಆಟಿದ ಕೂಟ” ಕಾರ್ಯಕ್ರಮ ನಡೆಸುವ ಬಗ್ಗೆ ಹಾಗೂ ಅದರ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು.

ಸಂಘದ ಅಧ್ಯಕ್ಷೆ ಗೀತಾ ಮೋಹನ ರೈ ಮಾತನಾಡಿ ಮುಂದೆ ಆಚರಿಸಲಿರುವ ಆಟಿದ ಕೂಟ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಹನೀಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು. ತಾಲ್ಲೂಕು ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ನಯನಾ ರೈ ನೆಲ್ಲಿಕಟ್ಟೆ ಇವರು ಸಂದರ್ಭಚಿತವಾಗಿ ಮಾತಾಡಿದರು.
ಈ ಸಂದರ್ಭದಲ್ಲಿ ನಯನಾ ವಿ.ರೈ ಕುದ್ಕಾಡಿ, ಸ್ವರ್ಣಲತಾ ಜೆ.ರೈ ಮತ್ತು ಮಹಿಳಾ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಕುಂತಲಾ ವಿ.ಕೆ. ಶೆಟ್ಟಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಸ್ವಾಗತಿಸಿ, ಹಿಂದಿನ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರು. ಹರಿಣಾಕ್ಷಿ ಜೆ ಶೆಟ್ಟಿ ವಂದಿಸಿದರು. ರಾಜೀವಿ ವಿ. ಶೆಟ್ಟಿ, ರವಿಚಂದ್ರ ರೈ, ಭಾಸ್ಕರ್ ರೈ ಸಹಕರಿಸಿದರು.