ಸವಣೂರು ಯುವಸಭಾಭವನದಲ್ಲಿ ವಿಶ್ವಯೋಗ ದಿನಾಚರಣೆ

0

ಪುತ್ತೂರು: ವಿಶ್ವಯೋಗ ದಿನಾಚರಣೆ ಅಂಗವಾಗಿ ಸವಣೂರು ಯುವ ಸಭಾಭವನದಲ್ಲಿ ಜೂ. 21 ರಂದು ಬಿಜೆಪಿ ಸುಳ್ಯ ಮಂಡಲ, ಪಾಲ್ತಾಡಿ, ಪುಣ್ಚಪ್ಪಾಡಿ, ಸವಣೂರು ಶಕ್ತಿಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು, ಹಾಗೂ ಸವಣೂರು ಯುವಕ ಮಂಡಲದ ವತಿಯಿಂದ ಯೋಗಾಭ್ಯಾಸ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.


ಓಂಕಾರ ಯೋಗಕೇಂದ್ರ ಕಲ್ಲಾರೆ, ಪುತ್ತೂರು ಇಲ್ಲಿನ ಮುಖ್ಯಸ್ಥ ಕರುಣಾಕರ ಉಪಾಧ್ಯಾಯ ರವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ದೀಪ ಬೆಳಗಿಸಿ, ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಗಿರಿಶಂಕರ್ ಸುಲಾಯ ದೇವಸ್ಯ, ಇಂದಿರಾ ಬಿ.ಕೆ.ಬಂಬಿಲ, ಸುಪ್ರೀತ್ ರೈ ಖಂಡಿಗ, ಚೇತನ್ ಕುಮಾರ್ ಕೋಡಿಬೈಲು, ಗಂಗಾಧರ್ ಪೆರಿಯಡ್ಕ, ಪುಷ್ಪವತಿ ಕೇಕುಡೆ, ಚಂದ್ರಾವತಿ ಸುಣ್ಣಾಜೆ, ಮಹೇಶ್ ಕೆ.ಸವಣೂರು, ದಯಾನಂದ ಮೆದು, ಪ್ರಕಾಶ್ ಮಾಲೆತ್ತಾರು, ಪ್ರಶಾಂತ್ ಬಂಬಿಲ, ಶೇಷಪ್ಪ ನಾಯ್ಕ ಕನಡಕುಮೇರು ಸಹಿತ ಹಲವು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here