ಪುತ್ತೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನೂ ಪ್ರಗತಿ ಪಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ ಡಾ.ಯು ಶ್ರೀಪತಿ ರಾವ್ ಮಾತನಾಡಿ, ಯೋಗಾಭ್ಯಾಸ ಯೋಗದಿನವಾದ ಇಂದಿಗೆ ಮಾತ್ರ ಸೀಮಿತವಾಗದೆ, ಎಲ್ಲ ದಿನ ಅಭ್ಯಾಸ ಮಾಡುವಂತಾಗಬೇಕು. ಯೋಗ ಮನುಷ್ಯ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಮುಖ್ಯವಾದದ್ದು, ದಿನನಿತ್ಯ ಯೋಗ ಆಚರಣೆಯಿಂದ ಈಗಿನ ಯುವ ಪೀಳಿಗೆಯನ್ನು ಕಾಡುತ್ತಿರುವ ಅತಿಯಾದ ದೇಹದ ತೂಕ, ಅತಿಯಾದ ರಕ್ತದೊತ್ತಡ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.

SPYSS ಪುತ್ತೂರು ತಾಲೂಕು ವರದಿಗಾರ ಲಕ್ಷ್ಮಿಕಾಂತ್ ಮಾತನಾಡಿ, ಯೋಗ ಧರ್ಮತೀತವಾದದ್ದು, ಯೋಗಭ್ಯಾಸವನ್ನು ಮಾಡುವುದರಿಂದ ಆರೋಗ್ಯವನ್ನು ಆಯುಸ್ಸನ್ನು ಹೆಚ್ಚುಗೊಳಿಸಬಹುದು, ಯಾವುದೇ ಸಂದರ್ಭವನ್ನು ಎದುರಿಸುವ ಮಾನಸಿಕ ಸಿದ್ಧತೆಗೆ ಯೋಗ ಅನುಕೂಲಕಾರಿ ಎಂದು ತಿಳಿಸಿದರು. ಇನ್ನೊರ್ವ ಅತಿಥಿಗಳು SPYSS ಘಟಕದ ಯೋಗ ಶಿಕ್ಷಕ ಅಶೋಕ್ ಎಂ ಯೋಗ ಪ್ರಾತ್ಯಕ್ಷಕೆಯೊಂದಿಗೆ ಯೋಗ ತರಗತಿ ನಡೆಸಿಕೊಟ್ಟರು. ಸಂಸ್ಥೆಯ ಆಡಳಿತಧಿಕಾರಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ದೀಕ್ಷಾಯಿನಿ ಮತ್ತು ಅನ್ನತ್ ಬೀಬಿ ಪ್ರಾರ್ಥಿಸಿ, IDMLT ವಿದ್ಯಾರ್ಥಿಗಳಾದ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿ, ರಕ್ಷಿತಾ ಧನ್ಯವಾದ ಸಮರ್ಪಿಸಿದರು.