ಬಡಗನ್ನೂರು: ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿ 2025-26ನೇ ಸಾಲಿನ ಮಂತ್ರಿ ಮಂಡಲವನ್ನು ರಚಿಸಲಾಯಿತು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣಾ ಘೋಷಣೆ, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಗುರುತಿನ ಚಿಹ್ನೆ ಹಂಚಿಕೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ ನಡೆಸಲಾಯಿತು. ಅಂತಿಮವಾಗಿ ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡನ್ನು ಗುರುತಿನ ಚೀಟಿಯಾಗಿ ಬಳಸಿಕೊಂಡು ಮತದಾನ ಕೇಂದ್ರದಲ್ಲಿ ಮೊಬೈಲ್ ಇವಿಎಂ ಮೂಲಕ ಮತ ಚಲಾಯಿಸಿದರು.

ಶಾಲಾ ಮುಖ್ಯಮಂತ್ರಿಯಾಗಿ ಫಾತಿಮತ್ ಶಫಾ (8ನೇ), ಉಪಮುಖ್ಯಮಂತ್ರಿಯಾಗಿ ವಿನ್ಯಶ್ರೀ ಕೆ.ಸಿ(8ನೇ) ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ದೇವಿಕಾ ಪಿ.ಸ್, ಗೃಹ ಮಂತ್ರಿಯಾಗಿ ಮಹಮ್ಮದ್ ಶಫೀರ್, ಉಪಗೃಹಮಂತ್ರಿಯಾಗಿ ರೋಕ್ಷಿತ್, ಆರೋಗ್ಯಮಂತ್ರಿಯಾಗಿ ಮನೀಶಾ ಪಿ, ಉಪ ಆರೋಗ್ಯಮಂತ್ರಿಯಾಗಿ ವಿರಾಜ್ ಕುಮಾರ್, ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ ಫಾತಿಮಾ ಫಝೀಲಾ, ಶ್ರೇಯಾ ಕೆ, ಸಾಂಸ್ಕೃತಿಕ ಮಂತ್ರಿಯಾಗಿ ಗಾಯತ್ರಿ , ಉಪಸಾಂಸ್ಕೃತಿಕ ಮಂತ್ರಿಯಾಗಿ ಸಿಂಚನಾ ಎ, ಸ್ವಚ್ಛತಾ ಮಂತ್ರಿಯಾಗಿ ಫಾತಿಮಾ ರಯೀಫಾ, ಉಪ ಸ್ವಚ್ಚತಾ ಮಂತ್ರಿಯಾಗಿ ಜಿತೇಶ್ ಕುಮಾರ್, ನೀರಾವರಿ ಮಂತ್ರಿಯಾಗಿ ಶ್ರವಣ್ ಕುಮಾರ್, ಶಯಾಪ್, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ಶಾಮಿಲ್, ಮಹಮದ್ ಹನಾನ್, ಕೃಷಿ ಮಂತ್ರಿಯಾಗಿ ತನ್ವಿತ್ ಎನ್, ಆದಿತ್ಯ ಎಂ, ಅನ್ವಿತ್ ಎ.ಪಿ, ಅಕ್ಷರದಾಸೋಹ ಮಂತ್ರಿಯಾಗಿ ಫಾತಿಮತ್ ಸುಹಾ, ಧೃತಿ, ಶೋಧನಾ ಮಂತ್ರಿಯಾಗಿ ಮುಹಮ್ಮದ್ ಸಾಬಿತ್ ಪಿ ಝೆಡ್, ಮುಹಮ್ಮದ್ ರಸ್ವಾನ್ ಎಂ ಆಯ್ಕೆಯಾದರು.
ಆಯ್ಕೆಯಾದ ಮಂತ್ರಿಗಳಿಗೆ ಶಾಲಾ ಮುಖ್ಯ ಗುರುಗಳಾದ ಹರಿಣಾಕ್ಷಿ ಎ ಪ್ರಮಾಣವಚನ ಬೋಧಿಸಿದರು. ಪದವೀಧರ ಶಿಕ್ಷಕಿ ವಿಜಯಲಕ್ಷ್ಮಿ ಚುನಾವಣೆಯ ಮಹತ್ವ ಗೌಪ್ಯತೆ ಬಗ್ಗೆ ತಿಳಿಸಿದರು. ಶಿಕ್ಷಕಿಯರಾದ ಮಧುಶ್ರೀ ಎಸ್, ಚೈತ್ರಾ, ಸೌಮ್ಯ ಚುನಾವಣೆ ಅಧಿಕಾರಿಗಳಾಗಿ ಸಹಕರಿಸಿದರು.