ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಅತಿಥಿಯಾಗಿ ಸಿಟಿ ಆಸ್ಪತ್ರೆಯ ಆಯುರ್ವೇದ ಯೋಗ ಕನ್ಸಲ್ಟೆಂಟ್ ವೈದ್ಯರಾದ ಡಾ. ಚೇತನಾ ಗಣೇಶ್ ರವರು ಯೋಗ ನಮ್ಮ ಅವಿಭಾಜ್ಯ ಅಂಗವಾಗಿರಲಿ, ”ಈಗಿನ ಮಕ್ಕಳು ದೈಹಿಕವಾಗಿ ಸಬಲರಾಗಿದ್ದರೂ ಕೂಡ ಮಾನಸಿಕವಾಗಿ ದುರ್ಬಲವಾಗಿದ್ದಾರೆ ಹಾಗಾಗಿ ಈಗಿನ ಮಕ್ಕಳು ಹಲವಾರು ದುಶ್ಚಟಗಳಿಗೆ ಬಲಿಯಾಗುವುದು ಸಾಮಾನ್ಯವಾಗಿದೆ, ಅಂತಹ ಸಮಸ್ಯೆಗಳ್ನು ಔಷಧಿಗಳಿಲ್ಲದೆ ಯೋಗದ ಮೂಲಕ ಪರಿಹರಿಸಲು ಸಾಧ್ಯ” ಎಂದು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹೇಳಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಸ್ಥೆಯ ಸಂಚಾಲಕರಾದ ಸೀತಾರಾಮ ರೈ ಕೆ ಸವಣೂರು ಇವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಆಡಳಿತಾಧಿಕಾರಿ ಅಢ್ವಕೇಟ್ ಆಶ್ವಿನ್ ಎಲ್ ಶೆಟ್ಟಿಯವರು ಯೋಗವು ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಹೇಗೆ ಸಹಕರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಟ್ರಸ್ಷಿ ಸದಸ್ಯರಾದ ರಶ್ಮಿ ಅಶ್ವಿನ್ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮ್ ಪ್ರಸಾದ್ ಕಲಾಯಿ, ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕೃಪಾಲಿ, ವಿದಿಶಾ ಶ್ರುತ ಜೈನ್ ನೆರವೇರಿಸಿದರು, ಸಂವಿಧಾನದ ಪೀಠಿಕೆಯನ್ನು ಧನ್ವಿತ್ ಮತ್ತು ಸ್ವಾಗತವನ್ನು ಶ್ರದ್ಧಾ ಧನ್ಯವಾದವನ್ನು ಆಯಿಷತ್ ಹನ್ನಾ, ಫಾತಿಮತ್ ಹನ್ನ ಕಾರ್ಯಕ್ರಮ ನಿರೂಪಿಸಿದರು.