ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಲಂಕಾರು ಶ್ರೀ ಭಾರತೀ ಶಾಖೆ ಮತ್ತು ಕೊಯಿಲ ಶ್ರೀ ಸದಾಶಿವ ಶಾಖೆಯ ಸಹಯೋಗದೊಂದಿಗೆ ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಸುಳ್ಯವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ದಿಸುವುದರೊಂದಿಗೆ ನಮಗೆ ಶಾಂತಿ, ನೆಮ್ಮದಿಯನ್ನು ನೀಡುತ್ತದೆ.ಯೋಗವು ನಮ್ಮ ಪಾರಂಪರಿಕ ಜೀವನ ಪದ್ದತಿಯ ಒಂದು ಭಾಗವಾಗಿದ್ದು ನಾವು ದಿನಾಲೂ ಯೋಗಭ್ಯಾಸದಲ್ಲಿ ಜೋಡಿಸಿಕೊಂಡು ಇತರರಿಗೂ ಯೋಗವನ್ನು ಪರಿಚಯ ಮಾಡಿಕೊಡುವ ಕೆಲಸವಾಗಬೇಕೆಂದು ತಿಳಿಸಿದರು.
ಎಸ್.ಪಿ.ವೈ.ಎಸ್.ಎಸ್ ನ ಶಾಖಾ ವಿಸ್ತರಣ ಪ್ರಮುಖರಾದ ಅನೀಶ್ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಗಳ ಮೂಲಕ ಅಸಂಖ್ಯಾತ ಯೋಗಬಂಧುಗಳು ದಿನಾಲೂ ಯೋಗಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಎಸ್.ಪಿ.ವೈ.ಎಸ್.ಎಸ್ ಶಾಖೆಗಳಲ್ಲಿ ದಿನಾಲೂ ಬೆಳಿಗ್ಗೆ 5:00 ರಿಂದ 6:30 ರ ತನಕ ಯೋಗಭ್ಯಾಸಗಳು ನಡೆಯುತ್ತಿದ್ದು ಇದರ ಪ್ರಯೋಜನವನ್ನು ಎಲ್ಲಾರು ಪಡೆದುಕೊಳ್ಳುವಂತೆ ತಿಳಿಸಿ ಜಗತ್ತಿಗೆ ಯೋಗವನ್ನು ಪರಿಚಯಿಸಿ ಕೊಟ್ಟ ದೇಶ ನಮ್ಮಭಾರತ ದೇಶ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.
ಮಂಗಳೂರು ಮಹಾನಗರದ ಸಂಚಾಲಕರಾದ ಆನಂದ ಕುಂಟಿನಿ ಯವರು ಆಸನ ಅಭ್ಯಾಸವನ್ನು ತಿಳಿಸಿ ಆಲಂಕಾರು ಶಾಖೆಯ ಯೋಗಬಂಧುಗಳಾದ ಮುತ್ತಪ್ಪ,ಪದ್ಮನಾಭ, ಗಣೇಶ್ ರೈ.ಕೆ ಭಜನೆ,ಅಮೃತವಚನ,ಪಂಚಾಂಗ ಪಠಣ ವಾಚಿಸಿ,ಮಾನಸಿಕ ಸಿದ್ದತೆ ಉಸಿರಾಟ ಕ್ರೀಯೆ ,ಗಣಪತಿ ನಮಸ್ಕಾರದ ವಿವರಣೆಯನ್ನು ಶಿಕ್ಷಕರಾದ ನಾರಾಯಣರವರು ನೀಡಿ, ಆಯುಷ್ ಇಲಾಖೆಯ ಪಠ್ಯಪುಸ್ತಕದ ಆಸನಭ್ಯಾಸವನ್ನು ಯೋಗ ಶಿಕ್ಷಕಿ ಮಲ್ಲಿಕಾ ವಿವರಣೆ ನೀಡಿ ಯೋಗಬಂಧುಗಳಾದ ಶರ್ಮಿಳಾ,ಬಾಲಚಂದ್ರ,ಪ್ರತಿಮಾ,ಮುತ್ತಪ್ಪನವರು ಪ್ರತ್ಯಕ್ಷತೆ ನೀಡಿದರು.
ಯೋಗಬಂದು ಜನಾರ್ಧನಾ ಕದ್ರ ಕಾರ್ಯಕ್ರಮ ನಿರೂಪಿಸಿ, ನಾರಾಯಣ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಯೋಗಶಿಕ್ಷಕರಾದ ಸದಾಶಿವ ಶೆಟ್ಟಿ ಮಾರಂಗ ಉದಯಕುಮಾರ್ ರೈ,ಮುರಳೀಕೃಣ್ಣ ಬಡಿಲ,ಜಿ.ಪಂ ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ,ಮುರುಳ್ಯ ಗ್ರಾ.ಪಂ ಉಪಾಧ್ಯಕ್ಷರಾದ ಜಾನಕಿ, ಬಿ.ಜೆ.ಪಿ ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ.ಎಸ್.ಟಿ ಮೋರ್ಚದ ಜಿಲ್ಲಾ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಎಸ್,ಸುಳ್ಯಮಂಡಲ ಯುವಮೋರ್ಚ ಕಾರ್ಯದರ್ಶಿ ದಿವಾಕರ ಕುಂಬಾರ ,ಆಲಂಕಾರು ಶಕ್ತಿ ಕೇಂದ್ರದ ಸಂಚಾಲಕ ಜಯಕರ ಪೂಜಾರಿ ಕಲ್ಲೇರಿ ಸೇರಿದಂತೆ ಆನೇಕ ಮಂದಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಆಲಂಕಾರು ಭಾರತಿ ಶಾಖೆ,ಕೊಯಿಲ ಶಾಖೆಯ ಯೋಗಬಂಧುಗಳು ಸೇರಿದಂತೆ ಯೋಗ ಬಂಧುಗಳು ಸೇರಿದಂತೆ ನೂರಕ್ಕು ಅಧಿಕ ಮಂದಿ ಬೆಳಿಗ್ಗಿನ ಜಾವದಲ್ಲಿ ವಿಶ್ವಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.