ಪಾಣಾಜೆ; ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ರಚನೆ

0

ಅಧ್ಯಕ್ಷರಾಗಿ ಗೀತಾ ಅರ್ ರೈ .ಪಿ, ಕಾರ್ಯದರ್ಶಿಯಾಗಿ ಶಾರದಾ ಗೋಪಾಲ.ಕೆ, ಕೋಶಾಧಿಕಾರಿಯಾಗಿ ಜಯಶ್ರೀ. ಡಿ

ನಿಡ್ಪಳ್ಳಿ;ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.8 ರಂದು ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ನೂತನ ಸಮಿತಿಯ  ಅಧ್ಯಕ್ಷರಾಗಿ ಗೀತಾ ಆರ್.ರೈ ಪಡ್ಯಂಬೆಟ್ಟು, ಕಾರ್ಯದರ್ಶಿಯಾಗಿ ಶಾರದಾ ಗೋಪಾಲ ಕೊಂದಲ್ಕಾನ ಹಾಗೂ ಕೋಶಾಧಿಕಾರಿಯಾಗಿ  ಜಯಶ್ರೀ ದೇವಸ್ಯ ಇವರು ಆಯ್ಕೆಯಾದರು.

ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂ.21 ರಂದು ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.ಸಮಿತಿಯ ಗೌರವಾಧ್ಯಕ್ಷರಾಗಿ  ರಣಮಂಗಲ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಉಪಾಧ್ಯಕ್ಷರಾಗಿ ಅನುರಾಧ ರೈ ಕೊಂದಲಡ್ಕ,ಜೊತೆ ಕಾರ್ಯದರ್ಶಿಯಾಗಿ ಗೀತಾ ದೇವಸ್ಯ, ಗೌರವ ಸಲಹೆಗಾರರಾಗಿ ಸದಾಶಿವ ರೈ ಸೂರಂಬೈಲು,ಪ್ರತಿಭಾ ಓಕುಣ್ಣಾಯ, ರಮಾನಾಥ ರೈ ಪಡ್ಯಂಬೆಟ್ಟು, ಲಕ್ಷ್ಮಿನಾರಾಯಣ ರೈ ಕೆದಂಬಾಡಿ, ವರದರಾಜ ನಾಯಕ್ ಆರ್ಲಪದವು,ಶ್ರೀನಿವಾಸ ರೈ ಮಂಟಮೆ, ಉಮೇಶ ರೈ ಗಿಳಿಯಾಲು, ಶ್ರೀಹರಿ ನಡುಕಟ್ಟ, ತಮ್ಮಣ್ಣ ನಾಯ್ಕ ಸುಡ್ಕುಳಿ ಇವರನ್ನು ಆರಿಸಲಾಯಿತು.

LEAVE A REPLY

Please enter your comment!
Please enter your name here