ಉಪ್ಪಿನಂಗಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿಯ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ 11ನೇ ವರ್ಷದ ಯೋಗ ವಾರ್ಷಿಕ ಹಬ್ಬವನ್ನು ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅರ್ತಿಲ ಕೃಷ್ಣ ರಾವ್, ಪತ್ರಕರ್ತ ಉದಯ ಕುಮಾರ್, ನ್ಯಾಯವಾದಿ ಸಂತೋಷ್ ಕುಮಾರ್, ಅರ್ಚಕ ರಾಜೇಂದ್ರ, ಯೋಗ ಬಂಧು ಶಶಿ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಡಾ. ಶ್ರುತಿ ಪಾರ್ವತಿ ಯೋಗದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ. ಗೋವಿಂದಪ್ರಸಾದ್ ಕಜೆ, ಯಶೋಧರ ಆಚಾರ್ಯ, ಮೋಹಿನಿ, ಹೇಮಲತಾ, ಶ್ವೇತಾ, ಆಶಾ, ರಾಜೇಶ್ , ಶೇಖರ್, ಆಶಾ ಭಟ್, ಸಂಜೀವ, ಪ್ರದೀಪ್, ಪೂರ್ವಿ, ವಿಜೇತ, ಭುವನೇಶ್ವರಿ ರೈ, ವರಪ್ರಸಾದ್, ಪುರಂದರ ಬಾರ್ಲ, ರಾಜೇಶ್ , ರಾಮಣ್ಣ ಸಪಲ್ಯ, ಹರೀಶ್ ಆಚಾರ್ಯ , ಚಂದ್ರಾವತಿ, ಸುಜಾತಕೃಷ್ಣ ಆಚಾರ್ಯ, ವೀಣಾ ಕಜೆ , ಶೋಭಾ ಮತ್ತಿತರರು ಭಾಗವಹಿಸಿದರು.