ಸರಕಾರದ ಅಭಿವೃದ್ದಿ ಮತ್ತು ಗ್ಯಾರಂಟಿ ಯೋಜನೆಗಳು ಜನರಿಗೆ ಕಾಂಗ್ರೆಸ್ ಮೇಲೆ ಒಲವು ಹೆಚ್ಚಿಸಿದೆ: ಶಾಸಕ ಅಶೋಕ್ ರೈ
ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ದಿ ಕೆಲಸಗಳು ಮತ್ತು ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಕಾಂಗ್ರೆಸ್ ಬಗ್ಗೆ ಒಲವು ಹೆಚ್ಚಿಸಿದೆ. ಮುಂದಿನ 15 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಭದ್ರವಾಗಿಯೇ ಉಳಿಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಸರ್ವೆ ಕಲ್ಲಮ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಅಭಿವೃದ್ದಿ ಕೆಲಸಗಳು ರಾಜ್ಯವನ್ನು, ಕ್ಷೇತ್ರವನ್ನು ಬೆಳಗಿಸಿದರೆ ಪಂಚ ಗ್ಯಾರಂಟಿಗಳು ಪ್ರತೀ ಮನೆಯನ್ನೂ ಬೆಳಗುವಂತೆ ಮಾಡಿದೆ. ಈ ಹಿಂದೆ ಇಲ್ಲಿ ಆಡಳಿತ ನಡೆಸಿದ ಸರಕಾರಗಳು ಕೇವಲ ಭರವಸೆಯಮೇಲೆ ಆಡಳಿತ ನಡೆಸಿದೆ. ಬಡ ಹಾಗೂ ಮಧ್ಯಮ ವರ್ಗಕ್ಕೆ ಬೇಕಾದ ಯಾವುದೇ ಯೋಜನೆಗಳನ್ನು ಹಿಂದಿನ ಬಿಜೆಪಿ ಸರಕಾರ ಜಾರಿ ಮಾಡಿಲ್ಲ. ಭರವಸೆಗಳನ್ನು ತೇಳಿ ಬಿಡುವ ಮೂಲಕ ಸುಳ್ಳು ಭರವಸೆಗಳ ಅಂತಸ್ತನ್ನೇ ನಿರ್ಮಾಣ ಮಾಡಿತ್ತು ಎಂದು ವ್ಯಂಗ್ಯವಾಡಿದರು.
ಅಭಿವೃದ್ದಿ ಕಂಡು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ: ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ಯಶಸ್ವಿಯಾಗುತ್ತಿರುವುದನ್ನು ಕಂಡು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರು ದಿನೇ ದಿನೇ ಮೈಪರಚಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕೋಸ್ಕರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ವಿರೋಧ ಮಾಡಿದವರೇ ಇಂದು ಕ್ಯೂನಲ್ಲಿ ನಿಂತು ಅದರ ಲಾಭ ಪಡೆಯುತ್ತಿದ್ದಾರೆ. ಜನತೆಗೆ ಮೋಸ ಮಾಡುವುದೇ ಬಿಜೆಪಿ ಉದ್ದೇಶವಾಗಿದೆ. ಸುಳ್ಳು ಹೇಳಿ ಜನರನ್ನುಮಂಗ ಮಾಡುವುದೇ ಬಿಜೆಪಿ ಅಜೆಂಡಾವಾಗಿರುತ್ತದೆ. ಇವರ ಜನವಿರೋಧಿ ನಿಲುವನ್ನು ಜನ ತಿರಸ್ಕಾರ ಮಾಡುತ್ತಿದ್ದಾರೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರ ಬಿಜೆಪಿಗೆ ಗೊತ್ತಾಗಿ ಈಗ ಅಲ್ಲಲ್ಲಿ ಪ್ರತಿಭಟನೆ ನಡೆಸುವ ಕರಲಸವನ್ನು ಮಾಡುತ್ತಿದೆ ಎಂದು ಶಾಸಕರು ಆರೋಪಿಸಿದರು.
ಪಕ್ಷ ಭೇದ ಮಾಡಬೇಡಿ:
ನಾನು ಶಾಸಕನಾಗಿ ಯಾವುದೇ ಕೆಲಸದಲ್ಲೂ ರಾಜಕೀಯ ಮಾಡದೆ ರಾಜ ಧರ್ಮ ಪಾಲನೆ ಮಾಡುತ್ತಿದ್ದೇನೆ. ಕಾರ್ಯಕರ್ತರು ತಮ್ಮ ಬೂತ್ ಗಳಲ್ಲಿ ಯಾವುದೇ ರಾಜಕೀಯ ಮಾಡದೆ ಜನರ ಕಷ್ಟ,ಸುಖಗಳಲ್ಲಿ ಭಾಗಿಯಾಗಬೇಕು. ತಳಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸವನ್ನು ಕಾರ್ಯಕರ್ತರುಮಾಡಬೇಕು ಎಂದು ಹೇಳಿದರು.
ನಿವೇಶನ ಕೊಟ್ಟೇ ಕೊಡ್ತೇವೆ:
ಪ್ರತೀ ಗ್ರಾಮದಲ್ಲಿ ನಿವೇಶನಕ್ಕಾಗಿ ಜಾಗ ಗುರುತಿಸಲಾಗಿದೆ. ನಿವೇಶನ ಇಲ್ಲದ ಬಡವರಿಗೆ ನಿವೇಶನ ಕೊಟ್ಟೇ ಕೊಡ್ತೇನೆ. ಚುನಾವಣೆಯ ವೇಳೆ ಕೊಟ್ಟ ಭಾಷೆಯನ್ನು ಈಡೇರಿಸುತ್ತೇನೆ. ಕಾರ್ಯಕರ್ತರು ನಿವೇಶನ ಇಲ್ಲದ ಕುಟುಂಬಗಳನ್ನು ಗುರುತಿಸಿ ಅವರಿಗೆ ನೆರವು ನೀಡುವ ಕರಲಸವನ್ನು ಮಾಡಬೇಕು.ಈಗ ಕ್ಷೇತ್ರದಲ್ಲಿ ಒಟ್ಟು 300 ಎಕ್ರೆ ಜಾಗ ನಿವೇಶನಕ್ಕೆ ಮಂಜೂರಾಗಿದೆ ಎಂದು ಶಾಸಕರು ಹೇಳಿದರು.
ಪಕ್ಷ ಸಂಘಟನೆಗೆ ಒತ್ತು ನೀಡಬೇಕು: ಕೆ ಪಿ ಆಳ್ವ
ಪಕ್ಷ ಸಂಘಟನೆಗೆ ನಾವೆಲ್ಲರೂ ಒತ್ತು ನೀಡಬೇಕು. ಪಕ್ಷ ಅಂದ್ರೆ ನಾವು, ನಾವೆಲ್ಲರೂ ಪಕ್ಷದ ಕಾರ್ಯಕರ್ತರಾಗಿದ್ದೇವೆ. ಪ್ರತೀ ಕಾರ್ಕರ್ತನೂ ಪಕ್ಷದ ಆಸ್ತಿಯಾಗಿದ್ದಾರೆ. ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೂಚನೆಯಂತೆ ನಾವು ಪ್ರತೀ ವಲಯ,ಬೂತ್ ಮಟ್ಟಕ್ಕೆ ತೆರಳಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಶಾಸಕರ ಅಭಿವೃದ್ದಿ ಕೆಲಸಕ್ಕೆ ಗೌರವ ನೀಡಿ ಅನ್ಯ ಪಕ್ಷದಿಂದಲೂ ನಮ್ಮ ಪಕ್ಷಕ್ಕೆ ಕಾರ್ಯಕರ್ತರು ಒಲವು ವ್ಯಕ್ತಪಡಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಸರಕಾರದ ಗ್ಯಾರಂಟಿ ಯೋಜನೆಗಳು ಜನರನ್ನು ಕಾಂಗ್ರೆಸ್ ನತ್ತ ಆಕರ್ಷಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಕಾರ್ಯಕರ್ತರು ಅಭಿಪ್ರಾಯ ಮಂಡಿಸಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ಸರ್ವೆದೊಳಗುತ್ತು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಭೆಯ ಅಜೆಂಡಾ ಮಂಡಿಸಿದರು.
ಸರ್ವೆ ವಲಯ ಉಸ್ತುವಾರಿ ರವೀಂದ್ರ ನೆಕ್ಕಿಲು, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ,ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಬ್ಲಾಕ್ ಪ್ರ.ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು,ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ, ಮುಂಡೂರು ಸಿ ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಂಡೂರು, ವಲಯ ಕಾರ್ಯದರ್ಶಿ ಸಿದ್ದಿಕ್ ಸುಲ್ತಾನ್, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ,ಬೂತ್ ಅಧ್ಯಕ್ಷರುಗಳಾದ ಅಶೋಕ ಎಸ್ ಡಿ, ಹನೀಫ್ ಕಲ್ಪನೆ,ಹಮೀದ್ ನೇರೋಳ್ತಡ್ಕ ,ಗ್ರಾಪಂ ಸದಸ್ಯರುಗಳಾದ ರಸಿಕ ಶಿವನಾಥ ರೈ, ಮಹಮ್ಮದಾಲಿ ನೇರೋಲ್ತಡ್ಕ, ಮಹಿಳಾ ಘಟಕದ ವಲಯಾಧ್ಯಕ್ಷ ಗೀತಾ ಮರಿಯ, ಪುತ್ತೂರು ಬ್ಲಾಕ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರಿತ್ ಕನ್ನಾರಾಯ, ರಾಮಚಂದ್ರ ಸೊರಕೆ, ಮಾಜಿ ತಾಪಂ ಸದಸ್ಯೆ ಸುಮತಿ,ಪ್ರಮುಖರಾದ ಹನೀಫ್ ಕೆಎಂ ರೆಂಜಲಾಡಿ, ಬೂತ್ ಕಾರ್ಯದರ್ಶಿ ಗಣೇಶ್ ನೇರೋಲ್ತಡ್ಕ, ಜಿಲ್ಲಾ ಸೇವಾದಳದ ಹಂಝ ಕೂಡುರಸ್ತೆ , ಕೊರಗಪ್ಪ ಸೊರಕೆ, ಶರೀಪ್ ಸರ್ವೆ, ತಾರನಾಥ ನಾಯ್ಕ ಚಂದ್ರಶೇಖರ ನಾಯ್ಕ, ಅಶ್ರಫ್ ಕೂಡುರಸ್ತೆ ಮೊದಲಾದವರು ಉಪಸ್ಥಿತರಿದ್ದರು.
