ಕಾಂಗ್ರೆಸ್ ಸರಕಾರದ ಆಡಳಿತದಿಂದ ರಾಜ್ಯ ದಿವಾಳಿಯಾಗಲಿದೆ: ಬೂಡಿಯಾರ್
ಪುತ್ತೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯಿಂದಾಗಿ ಕೂಲಿ ಕಾರ್ಮಿಕನಿಂದ ಹಿಡಿದು ರಾಜ್ಯದ ಜನತೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಬಡವರಿಗೆ ಅನ್ಯಾಯವಾಗುತ್ತಿದೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬರುತ್ತಿಲ್ಲ, ವಿದ್ಯುತ್ ದರ ಏರಿಕೆಯಾಗುತ್ತಿದೆ. ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಯಾಗುತ್ತಿಲ್ಲ, ಅಕ್ರಮ ಸಕ್ರಮಗಳು ಆಗುತ್ತಿಲ್ಲ, 9-11 ನಿವೇಶನಗಳ ಸಮಸ್ಯೆ ಉಂಟಾಗಿದೆ. ವಸತಿ ಯೋಜನೆಗೆ ಹಣ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಂಚ ಕೊಡಬೇಡಿ ಎಂಬುದು ಕೇವಲ ಭಾಷಣಕ್ಕೆ ಸೀಮಿತಾಗಿದೆ ಅದು ಬಿಟ್ಟರೆ ಪ್ರತಿಯೊಂದು ಕಛೇರಿಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಇದೇ ಕಾಂಗ್ರೆಸ್ ಸರಕಾರ ನಮ್ಮ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯಲಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರ ಹಾಗೂ ಒಳಮೊಗ್ರು ಶಕ್ತಿಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಜೂ.23 ರಂದು ಒಳಮೊಗ್ರು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಗ್ಯಾರಂಟಿಗಳ ಭರಾಟೆಯಲ್ಲಿ ಫ್ರೀ ಫ್ರೀ ಎಂದು ಕೊಟ್ಟು ಇಡೀ ರಾಜ್ಯವನ್ನೇ ಮಾರಾಟ ಮಾಡುವ ಸ್ಥಿತಿಗೆ ಮುಟ್ಟಿದೆ ಎಂದು ಬೂಡಿಯಾರ್ರವರು, ಈ ಗ್ಯಾರಂಟಿಗಳಿಂದಾಗಿ ಪಂಚಾಯತ್ಗಳಿಗೆ ಇಂದು ಅನುದಾನವೇ ಬರುತ್ತಿಲ್ಲ ಇದರಿಂದಾಗಿ ಪಂಚಾಯತ್ನಲ್ಲಿ ಆಡಳಿತ ಮಂಡಳಿಗೆ ಕೆಲಸವೇ ಇಲ್ಲದಂತಾಗಿದೆ ಎಂದು ಅವರು ಹೇಳಿದರು.
ಒಳಮೊಗ್ರು ಗ್ರಾಮಕ್ಕೆ 23 ಕೋಟಿ 44 ಲಕ್ಷ ಅನುದಾನ ಬಂದಿತ್ತು
ಹಿಂದಿನ ಅವಧಿಯಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿರುವ ಸಮಯದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರುರವರು ಒಳಮೊಗ್ರು ಗ್ರಾಮದ ಅಭಿವೃದ್ಧಿಗೆ ಸುಮಾರು 23 ಕೋಟಿ 44 ಲಕ್ಷ ರೂಪಾಯಿಗಳ ಅನುದಾನವನ್ನು ಒದಗಿಸಿಕೊಟ್ಟಿದ್ದರು. ಈ ಅನುದಾನದಲ್ಲಿ ಗ್ರಾಮದಲ್ಲಿ ಬಹಳಷ್ಟು ಕಾಮಗಾರಿಗಳು ನಡೆದಿದೆ ಎಂದು ಬೂಡಿಯಾರ್ ರಾಧಾಕೃಷ್ಣ ರೈಯವರು ಈ ಅನುದಾನದಲ್ಲಿ ಕಳೆದ ವರ್ಷ ಬಾಕಿ ಉಳಿದಿದ್ದ ಹಣವನ್ನು ಈ ವರ್ಷ ಅನುದಾನವನ್ನಾಗಿ ಗ್ರಾಮಕ್ಕೆ ಕೊಟ್ಟಿದ್ದಾರೆ ಎಂಬ ಮಾತನ್ನು ಕೂಡ ಈ ಸಂದರ್ಭದಲ್ಲಿ ಅವರು ಹೇಳಿದರು.
ಇದೊಂದು ಸಾಂಕೇತಿಕ ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು ಮಾಡುತ್ತಿರುವುದನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಭಾರತೀಯ ಜನತಾ ಪಾರ್ಟಿಯಿಂದ ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಪ್ರತಿ ಗ್ರಾಮದಲ್ಲೂ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಬೂಡಿಯಾರ್ ರಾಧಾಕೃಷ್ಣ ರೈ ನೀಡಿದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು, ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಪ್ರದೀಪ್ ಸೇರ್ತಾಜೆ, ರೇಖಾ ಯತೀಶ್, ನಳಿನಾಕ್ಷಿ, ನಿಮಿತಾ ರೈ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಅಮರನಾಥ ರೈ ಕೈಕಾರ, ಶ್ರೀನಿವಾಸಪ್ರಸಾದ್ ನಾಯ್ಕ ಮುಡಾಲ, ಶಿವರಾಮ ಗೌಡ ಬೊಳ್ಳಾಡಿ, ಒಳಮೊಗ್ರು ಗ್ರಾಮ ಬಿಜೆಪಿ ಬೂತ್ ಅಧ್ಯಕ್ಷರುಗಳಾದ ಸುಶಾಂತ್ ಅಜ್ಜಿಕಲ್ಲು, ಅಶ್ವಿನಿ ಪಿದಪಡ್ಲ, ಅರುಣ್ ರೈ ಬಿಜಳ, ರಮೇಶ್ ರೈ ನೀರ್ಪಾಡಿ, ಜಯರಾಮ ಆಚಾರ್ಯ, ಶಿವರಾಮ ಗೌಡ, ಕಾರ್ಯದರ್ಶಿಗಳಾದ ಸತೀಶ್ ರೈ ಅಡ್ಕ, ಅನಿಲ್ ರೈ ಬಾರಿಕೆ, ನಿತಿನ್ ಗೌಡ ಪರ್ಪುಂಜ, ಶ್ರೀನಿವಾಸ ನಾಯ್ಕ ಬಿಜತ್ರೆ, ಪ್ರಮಖರಾದ ಉಷಾ ನಾರಾಯಣ್, ಸುಧಾಕರ ರೈ ಕುಂಬ್ರ, ಪ್ರವೀಣ್ ಪಲ್ಲತ್ತಾರು, ರಾಧಾಕೃಷ್ಣ ರೈ ತುಂಡುಬೈಲ್, ಪುರಂದರ ಶೆಟ್ಟಿ ಮುಡಾಲ, ಚಂದ್ರಹಾಸ ರೈ ಪನಡ್ಕ, ಸುಮಿತ ರೈ ನೀರ್ಪಾಡಿ, ನಾರಾಯಣ ರೈ ನೀರ್ಪಾಡಿ, ರಾಜೇಶ್ ಪೂಜಾರಿ ಪಿದಪಟ್ಲ, ರಾಮಕೃಷ್ಣ ಮುಡಾಲ, ರಾಕೇಶ್ ರೈ ಪರ್ಪುಂಜ, ರಾಜೇಶ್ ಗೌಡ ಶೇಡಿಗುಂಡಿ, ಜಗದೀಶ್ ಗೌಡ ಶೇಡಿಗುಂಡಿ, ಕಿಶಾನ್ ಪರ್ಪುಂಜ, ಧನುಷ್ ರೈ ಪರ್ಪುಂಜ, , ಉದ್ಭವ್ ಅಜಲಡ್ಕ, ಶ್ರೀದೀಪ್ ಅಜಲಡ್ಕ, ಕೃಷ್ಣಪ್ಪ, ವರುಣ್, ಆದರ್ಶ್ ಸಹಿತ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಮನವಿ ಸಲ್ಲಿಕೆ
ಹಿಂದಿನ ಮಾದರಿಯಲ್ಲೇ 8/11 ಖಾತೆ ನೀಡಬೇಕು, 11 ಬಿ ಖಾತೆಯನ್ನು ನೀಡದಂತೆ ಆದೇಶ ಮಾಡಿರುವುದನ್ನು ಕೈ ಬಿಡಬೇಕು, 1-5 ಪ್ಲಾಟಿಂಗ್ ಆಗದಿರುವ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು, ಈ ಹಿಂದಿನಂತೆ ವಿದ್ಯಾರ್ಥಿ ವೇತನ ನೀಡಬೇಕು, ಬಿಪಿಎಲ್ ಪಡಿತರ ಚೀಟಿ ವಿತರಿಸಬೇಕು, ರೈತರ ಬಾಕಿ ಇರುವ ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡಬೇಕು ಇತ್ಯಾದಿ ಹಲವು ಬೇಡಿಕೆಗಳಿರುವ ಮನವಿಯನ್ನು ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ರವರಿಗೆ ಕೊಡುವ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.