ಪುತ್ತೂರು: ಸವಣೂರು ಮುಖ್ಯ ರಸ್ತೆಯಿಂದ ಬಸದಿಗೆ ಸಂಪರ್ಕ ಮಾಡುವ, ಪದ್ಮಾಂಭ ಮತ್ತು ಕಾರ್ತಿಕೇಯ ಕಾಂಪ್ಲೆಕ್ಸ್ ನಡುವೆ ಹಾದುಹೋಗುವ ರಸ್ತೆಯು ಹದಗೆಟ್ಟಿದ್ದು, 80 ಮೀಟರ್ ರಸ್ತೆ ಮಾತ್ರ ಕಾಂಕ್ರೀಟ್ ಕರಣಗೊಳಿಸಲು ಬಾಕಿ ಇದ್ದು, ಈಗ ಮಳೆಗಾಲ ಆಗಿರುವ ಹಿನ್ನಲೆ ರಸ್ತೆ ತುಂಬ ಮಳೆ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಜನಪ್ರತಿನಿಧಿಗಳು ಶೀಘ್ರ ಕ್ರಮಕೈಗೊಂಡು ರಸ್ತೆ ಕಾಂಕ್ರೀಟಿಕರಣ ಪೂರ್ಣಗೊಳಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.