ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಸೌಮ್ಯ ಸಂತೋಷ್ ದಂಪತಿಗಳಿಂದ ಶುಕ್ರದಿತ್ಯಾ ಸಂಧಿ ಶಾಂತಿ ಹೋಮವು ಜೂ.19 ರಂದು ನೆರವೇರಿತು.
ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಕೆಮ್ಮಿಂಜೆ ದೇವಸ್ಥಾನದಲ್ಲಿ ಸಂಧಿ ಶಾಂತಿ ಹೋಮ ಮಾಡಿಸುವುದಕ್ಕೆ ನಿರ್ಧರಿಸಿ, ಹೋಮಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಭಕ್ತಿಯಿಂದ ಹೋಮ ನೆರವೇರಿಸಿದ ಅರ್ಚಕರ ತಂಡಕ್ಕೆ ಹಾಗೂ ವ್ಯವಸ್ಥೆ ಮಾಡಿದ ವ್ಯವಸ್ಥಾಪನಾ ಸಮಿತಿಯವರಿಗೆ ಸೌಮ್ಯ ಸಂತೋಷ್ ದಂಪತಿ ಕೃತಜ್ಞತೆ ಸಲ್ಲಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸಹಿತ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಿಬ್ಬಂದಿ ಭರತ್, ರಘುನಾಥ್ ಪೂಜಾರಿರವರು ಉಪಸ್ಥಿತರಿದ್ದರು.
ನಿರಂತರ ಸಂಧಿ ಶಾಂತಿ ಹೋಮಗಳು:
ದೇವಸ್ಥಾನದಲ್ಲಿ ನಿರಂತರ ಸಂಧಿ ಶಾಂತಿ ಹೋಮಗಳು ನಡೆಸಲಾಗುತ್ತಿದ್ದು, ದೇವಸ್ಥಾನದ ಒಳಗಡೆ ಹಾಗೂ ಹೊರಗಡೆ ಆಗುವ ಹೋಮ ಇತ್ಯಾದಿಗಳು ದೇವಸ್ಥಾನದ ವತಿಯಿಂದಲೇ ಮಾಡುವುದಾಗಿದೆ ಎಂದು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೋಮಗಳನ್ನು ಮಾಡಿಸುವ ಭಕ್ತರು ದೇವಸ್ಥಾನದ ಕೌಂಟರ್ ನಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.