ನೆಲ್ಯಾಡಿ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನೆಲ್ಯಾಡಿ ಗ್ರಾಮದ ಶ್ರೀಶೈನ್ ಗ್ರಾಮ ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯ ಬಾಲಕೃಷ್ಣ ಇವರ ನಷ್ಟ ಪರಿಹಾರ ಮೊತ್ತ ರೂ.50 ಸಾವಿರವನ್ನು ಅವರ ವಾರಿಸುದಾರರಾದ ಲೀಲಾವತಿ ಇವರಿಗೆ ವಿತರಿಸಲಾಯಿತು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ಕಮಲ, ಯೋಜನೆಯ ಮೇಲ್ವಿಚಾರಕಿ ಸವಿತಾ ರೈ, ಗೋಳಿತ್ತೊಟ್ಟು ವಲಯದ ಸಂಯೋಜಕಿ ಭಾರತಿ ಡಿ.ಕೆ, ಒಡಿಯೂರು ಶ್ರೀ ವಿ.ಸೌ.ಸ.ಸಂಘದ ಉಪ್ಪಿನಂಗಡಿ ಶಾಖಾ ಸಿಬ್ಬಂದಿ ಕೌಶಿಕ್ ರೈ, ನೆಲ್ಯಾಡಿ ಗ್ರಾಮದ ಸೇವಾದೀಕ್ಷಿತೆ ಹರಿಣಾಕ್ಷಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.