
ಪುತ್ತೂರು ಪುತ್ತೂರು ಮತ್ತು ಕಡಬ ತಾಲೂಕಿನ ಭಾರತ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ ಜಲ್ ಮಿತ್ರ ತರಬೇತಿಯ 17 ದಿವಸಗಳ ತರಗತಿ ಅವಧಿ ಸಮಾರೋಪ ಸಮಾರಂಭ ನರಿಮೊಗರು ಸರಕಾರಿ ಐಟಿಐ ಸಂಸ್ಥೆಯಲ್ಲಿ ಜೂ.23ರಂದು ನಡೆಯಿತು.
ಅಧ್ಯಕ್ಷತೆಯನ್ನು ಸರಕಾರಿ ಐಟಿಐ ಸಂಸ್ಥೆ ಪ್ರಭಾರ ಪ್ರಾಂಶುಪಾಲ ರಾಜೀವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ಸಹಾಯಕ ನಿರ್ದೇಶಕಿ ಸತ್ಯಲತಾ , ಮಂಗಳೂರು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ಸಾಂಕಿಕ ಅಧಿಕಾರಿ ವಿಜಯಲಕ್ಷ್ಮಿ , ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪುತ್ತೂರಿನ ಸುರೇಶ್ ದೊಡ್ಡಮನಿ , ಎನ್ ಆರ್ ಎಲ್ ಎಂ ಮಂಗಳೂರು ಜಿಲ್ಲಾ ವ್ಯವಸ್ಥಾಪಕಿ ಶಕುಂತಲಾ , ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ತಾಲೂಕು ಪಂಚಾಯತ್ ಪುತ್ತೂರಿನ ನಾಗೇಶ್ ,ನರಿಮೊಗರು ಸರಕಾರಿ ಐಟಿಐ ಸಂಸ್ಥೆಯ ಯೋಗೇಶ್ JTO , ಎನ್ ಆರ್ ಎಲ್ ಎಮ್ ಪುತ್ತೂರು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್. ಕೆ, ಆಡಳಿತ ಅಧಿಕಾರಿ ಸರಕಾರಿ ಐಟಿಐ ಸಂಸ್ಥೆ ನರಿಮೊಗರುವಿನ ಹೇಮಲತಾ , ತಾಲೂಕು ವ್ಯವಸ್ಥಾಪಕರು ಕೃಷಿಯೇತರ ಚಟುವಟಿಕೆ ಪುತ್ತೂರಿನ ನಳಿನಾಕ್ಷಿ , ನರಿಮೊಗರು ಸರಕಾರಿ ಐಟಿಐ ಕಾಲೇಜಿನ ಉಷಾ JTO ವೇದಿಕೆಯಲ್ಲಿ ಉಪಸ್ಥಿತರಿದ್ದರು.