ಜು.10ರಿಂದ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ

0

ಪುತ್ತೂರಿನಿಂದ ಶ್ರೀ ಗುರುಗಳ ಪಾದುಕೆಯ ರಜತ ಹರಿವಾಣ ಸಮರ್ಪಣೆಗೆ ನಿರ್ಣಯ

ಪುತ್ತೂರು: ಉಡುಪಿ ಜಿಲ್ಲೆಯ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಜು. 10ರಿಂದ ಪಡಕುತ್ಯಾರು ಸರಸ್ವತೀ ಮಂದಿರದಲ್ಲಿ ಜರುಗಲಿರುವ ಹಿನ್ನೆಲೆಯಲ್ಲಿ ಪುತ್ತೂರು ಸಂಘ ಸಂಸ್ಥೆಗಳಿಗೆ ಆಮಂತ್ರಣ ಪತ್ರ ವಿತರಣೆ ನೀಡುವ ಕುರಿತು ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಪೂರ್ವ ಭಾವಿ ಸಭೆ ನಡೆದಿದ್ದು ಸಭೆಯಲ್ಲಿ ಶ್ರೀ ಗುರುಗಳಿಗೆ ಪಾದುಕೆಯ ರಜತ ಹರಿವಾಣ ಸಮರ್ಪಣೆ ಮಾಡುವ ಕುರಿತು ನಿರ್ಣಯಿಸಲಾಯಿತು.

ಚಾತುರ್ಮಾಸ್ಯ ವ್ರತಾಚಾರಣೆ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಕೂಡುವಳಿಕೆ ಮೊಕ್ತೇಸರರುಗಳಿಗೆ ವಿತರಿಸಿದ ಬಳಿಕ ಇತರ ವಿಚಾರದ ಕುರಿತು ಸದಸ್ಯರಿಂದ ಸಲಹೆ ಸೂಚನೆ ಪಡೆಯಲಾಯಿತು. ಈ ಸಂದರ್ಭ ಶ್ರೀ ಗುರುಗಳ ಪಾದುಕೆಯ ರಜತ (ಅಂದಾಜು 1.5 ಕೆ.ಜಿ) ಹರಿವಾಣವನ್ನು ನಿರ್ಮಿಸಿ ಶ್ರೀ ಗುರುಗಳಿಗೆ ಸಮರ್ಪಿಸುವುದೆಂದು ನಿರ್ಣಯಿಸಲಾಯಿತು. ಹಣ ಅಥವಾ ಬೆಳ್ಳಿಯ ರೂಪದಲ್ಲಿ ದೇಣಿಗೆ ನೀಡುವಂತೆ ಆನೆಗುಂದಿ ಗುರುಸೇವಾ ಪರಿಷತ್‌ನ ಮಹಾಮಂಡಲದ ಅಧ್ಯಕ್ಷ ವಿ.ಪುರುಷೋತ್ತಮ ಅಚಾರ್ಯ ವಿನಂತಿಸಿದರು.

ದೇಣಿಗೆ ಸಮರ್ಪಣೆ ಮಾಡುವವರು ಶ್ರೀ ಗಣೇಶ್ ಜ್ಯುವೆಲ್ಲರ್ಸ್ ಕೋರ್ಟ್ ರಸ್ತೆ, ಮೊ: 9743083905, ಹಾರ್ಧಿಕ್ ಡೈ ವರ್ಕ್ಸ್ ರಾಘವೇಂದ್ರ ಕಾಂಪ್ಲೆಕ್ಸ್ ಪುತ್ತೂರು ಮೊ: 9844475793 ಅನ್ನು ಸಂಪರ್ಕಿಸುವಂತೆ ವಿನಂತಿಸಲಾಯಿತು. ವಿಶ್ವ ಬ್ರಾಹ್ಮಣ ಸೇವಸಂಘ ಬೊಳುವಾರು ಇದರ ಅಧ್ಯಕ್ಷ ಕೆ.ಶ್ರೀಧರ ಆಚಾರ್ಯ, ವಿಶ್ವಕರ್ಮ ಯುವ ಸಮಾಜ ಬೊಳುವಾರು ಇದರ ಅಧ್ಯಕ್ಷ ಪ್ರಕಾಶ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ಇದರ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಅಚಾರ್ಯ ಮತ್ತು ಸದಸ್ಯರು, ದ. ಕ ಜಿಲ್ಲಾ ಹಿತರಕ್ಷಣಾ ಸಂಘ ಅಧ್ಯಕ್ಷ ಸುರೇಂದ್ರ ಆಚಾರ್ಯ ಹಾಗೂ ಗೌರವ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಗುರುಸೇವಾ ಪರಿಷತ್ ಉಪಾಧ್ಯಕ್ಷ ಮುರುಳಿಧರ ಆಚಾರ್ಯ ಗುಡ್ಡೆಮನೆ, ಕಾರ್ಯದರ್ಶಿ ನಿರಂಜನ್ ಆಚಾರ್ಯ ಮರೀಲು, ಕೋಶಾಧಿಕಾರಿ ಜಯಪ್ರಕಾಶ್ ಆಚಾರ್ಯ ಕುಡ್ಚಿಲ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಈಶ್ವರಮಂಗಲ, ಜಗದೀಶ ಆಚಾರ್ಯ ಹಾರ್ದಿಕ್ ಡೈ ವರ್ಕ್ಸ್ , ಹೇಮಂತ್ ಆಚಾರ್ಯ ಬನ್ನೂರು, ಸುರೇಶ್ ಆಚಾರ್ಯ ಕಾಣಿಯೂರು, ಪ್ರಭಾಕರ ಆಚಾರ್ಯ ಲೆಕ್ಚರರ್, ಗೋಪಾಲ ಆಚಾರ್ಯ ಕಂಬಾರ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಪುರೋಹಿತ ಸಚಿನ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here