ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜು ಶಿಕ್ಷಕ-ರಕ್ಷಕ ಸಂಘ

0

ಅಧ್ಯಕ್ಷ-ಸನ್ನಿ ಕೆ.ಎಸ್., ಉಪಾಧ್ಯಕ್ಷ-ಸುಧೀರ್‌ಕುಮಾರ್, ನಿಷ್ಮಾ ಆರಿಫ್, ಜೊತೆ ಕಾರ್ಯದರ್ಶಿ-ಮೇರಿ ಸ್ಟೆಫಿ

ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ 2025-26ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಸನ್ನಿ ಕೆ.ಎಸ್., ಉಪಾಧ್ಯಕ್ಷರಾಗಿ ಸುಧೀರ್ ಕುಮಾರ್ ಕೆ.ಎಸ್., ನಿಷ್ಮಾ ಆರಿಫ್, ಜೊತೆ ಕಾರ್ಯದರ್ಶಿಯಾಗಿ ಮೇರಿ ಸ್ಟೆಫಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಿಕ್ಷಕಿ ರಾಜಮ್ಮ ಆಯ್ಕೆಯಾಗಿದ್ದಾರೆ.


ಜೂ.24ರಂದು ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ನಿಖಿಲ್, ನಿಕ್ಷಿತಾ, ರಜಿಕ್, ಪ್ರಕಾಶ್, ವಂದನಾ, ಲೀನಾ, ಜೇಸ್ವಿಯಾ, ಹಸೀನಾ, ಜೋಸ್ ಪಿ, ಯಶೋಧ, ಹರಿಪ್ರಸಾದ್, ಸಲೀಂ, ಜೀನಿಷಾ ಟಿ, ಶಾಜಿ, ಕುಮಾರೇಂದ್ರ, ಮಲ್ಲಿಕಾ, ಪ್ರೀಯಾ, ದೀಪಾ ಸನೀಶ್, ಹಮೀದ್ ಕೆ.ಎಸ್., ಜೋಸ್ ವಿ.ಜೆ., ಸಮೀನಾ, ಮರಿಯಾ, ಸತೀಶ್ ಕೆ.ಎಸ್., ಸುಮಯ್ಯ ಆಯ್ಕೆಯಾದರು.


ಕಾಲೇಜಿನ ಸಂಚಾಲಕರಾದ ಫಾ. ಜೈಸನ್ ಸೈಮನ್, ಪ್ರಾಂಶುಪಾಲರಾದ ವರ್ಗಿಸ್ ಕೈಪನಡ್ಕ, ಫಾ.ಶ್ಯಾಮುವೆಲ್, ಮುಖ್ಯಶಿಕ್ಷಕ ಜಾರ್ಜ್ ಕೆ ತೋಮಸ್, ಜೋಸ್ ಪ್ರಕಾಶ್, ಮೋನೋಜ್ ಟಿ., ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here