ಜು.7 : ಸುಳ್ಯಪದವು ಶಬರಿ ನಗರ,ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ತಾಂಬೂಲ ಪ್ರಶ್ನಾಚಿಂತನೆ 

0

ಬಡಗನ್ನೂರು: ಸುಳ್ಯಪದವು ಶಬರಿ ನಗರ,ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ಹಾಗೂ ಗುಳಿಗರಾಜನಿಗೆ ಕಟ್ಟೆ ನಿರ್ಮಾಣ ಸತತ 12 ವರ್ಷಗಳಿಂದ ಪ್ರತೀ ವರ್ಷ ನೇಮೋತ್ಸವ ಹಾಗೂ ಪ್ರತೀ ತಿಂಗಳ ಸಂಕ್ರಮಣ ದಿವಸ ಕೊರಗಜ್ಜನಿಗೆ ಅಗೇಲು ಸೇವೆ ಹಾಗೂ ಶ್ರೀ ಗುಳಿಗರಾಜನಿಗೆ ಕಲಶ ಸೇವೆ ನಡೆಯುತ್ತಿದ್ದು, ಇದೀಗ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ 12 ತುಂಬಿ 13 ರ ಸಂಭ್ರಮದ ಪರ್ವಕಾಲ. 

ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ 12 ವರ್ಷಕೊಮ್ಮೆ ಕ್ಷೇತ್ರದ ವೖದ್ಧಿಗಾಗಿ ದೇವರಿಗೆ ಬ್ರಹ್ಮಕಲಶಾಷೇಕ ದೖೆವಗಳಿಗೆ ಕಲಶಾಭೀಷೇಕ ಮಾಡುವ ಪದ್ಧತಿ ಹಿಂದೂ ಸನಾತನ ಸಂಸ್ಕೃತಿ. ಇದೀಗ ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ 13 ನೇ ವರ್ಷದ ಪರ್ವಕಾಲದಲ್ಲಿ ಸಾನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಮಾಡುವ ನಿಟ್ಟಿನಲ್ಲಿ  ಜು. 7 ರಂದು ಮುಳ್ಳೇರಿಯ  ಶ್ರೀ ಬಾಲಕೃಷ್ಣನ್‌, ಜ್ಯೋತಿಷ್ಯ ಹಾಗೂ ಶ್ರೀ ಸಜೀಶ್ , ಜ್ಯೋತಿಷ್ಯ ರವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾಚಿಂತನೆ ನಡೆಯಲಿರುವುದು.

ಸ್ಥಳೀಯರ ಮತ್ತು ಊರಿನ ಸಮಸ್ತ ಭಕ್ತ ಜನತೆಯ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಬಯಸುತ್ತಾ, ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ  ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಾಶರದಮೂಲೆ ಮತು ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here