ಕೌಡಿಚ್ಚಾರು ಯಕ್ಷಗಾನ ನಾಟ್ಯ ತರಬೇತಿ ತರಗತಿ ಉದ್ಘಾಟನೆ

0

ಪುತ್ತೂರು: ಶ್ರೀ ಕೃಷ್ಣ ಯಕ್ಷಗಾನ ಕಲಾ ಸಂಘ ಕೌಡಿಚ್ಚಾರು ಇದರ ವತಿಯಿಂದ ನಡೆಯುವ ಯಕ್ಷಗಾನ ನಾಟ್ಯ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ನಾಟ್ಯ ತರಬೇತಿ ತರಗತಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಾಸು ಪೂಜಾರಿ ಗುಂಡ್ಯಡ್ಕ, ಕುಶಾಲಪ್ಪ ಗೌಡ ಮಡ್ಯಂಗಳ, ತಿಲಕ್ ರೈ ಕುತ್ಯಾಡಿ, ಯಕ್ಷಗಾನ ನಾಟ್ಯ ಗುರುಗಳಾದ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಕೊರಗಪ್ಪ ಗೌಡ ಮಡ್ಯಂಗಳ, ದೀಪಕ್ ಕುಲಾಲ್, ಸುಬ್ರಮಣ್ಯ ಗೌಡ ಪಾಪೆಮಜಲು, ಚಂದ್ರ ಜಿ ಕುತ್ಯಾಡಿ, ಶಾಂಭವಿ ಕುತ್ಯಾಡಿ ಸೇರಿದಂತೆ ನಾಟ್ಯ ಕಲಿಯುವ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here