ನಿವೃತ್ತ ಎ.ಎಸ್.ಐ ಪುರುಷೋತ್ತಮ ಹೆಗ್ಡೆಯವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯ

0

ಪುತ್ತೂರು: 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸಿ , ಪುತ್ತೂರು ನಗರ ಠಾಣೆಯಲ್ಲಿ ಉಪ ಸಹಾಯಕ ನಿರೀಕ್ಷರಾಗಿಯೂ (ಎ.ಎಸ್.ಐ) ಸೇವೆ ಸಲ್ಲಿಸಿದ್ದ ಇಲ್ಲಿನ ಸಾಮೆತ್ತಡ್ಕ ನಿವಾಸಿ ಪುರುಷೋತ್ತಮ ಟಿ ಹೆಗ್ಡೆ ಇತ್ತೀಚೆಗೆ ಮೃತರಾಗಿದ್ದು, ಇವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಜೂ.26 ರಂದು ನಡೆಯಿತು.


ನಿವೃತ್ತ ಎ ಎಸ್ ಐ ರಘುರಾಮ ಹೆಗ್ಡೆ ಉರ್ಲಾಂಡಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಾನೆಗೈದು, ಗುಣಗಾನ ಮಾಡಿ ನಮಿಸಿದರು. ಪುತ್ರ ವಿನಯರಾಜ್ ಹೆಗ್ಡೆ ದೀಪ ಬೆಳಗಿಸಿ ನಮಸ್ಕರಿಸಿದರು. ಬಳಿಕ ಮೌನ ಪ್ರಾರ್ಥನೆ ನೆರವೇರಿತು.


ನಿವೃತ್ತ ಲೋಕಾಯುಕ್ತ ಡಿ ವೈ ಎಸ್ ಪಿ ಮಂಜಯ್ಯ , ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಶಿವಾನಂದ ಹೆಗ್ಡೆ , ರೇಖಾ ಕಿಶೋರ್ ಬೆಂಗಳೂರು , ವೈಟ್ ಲಿಫ್ಟರ್ ಪುಷ್ಪರಾಜ್ ಹೆಗ್ಡೆ , ನಿವೃತ್ತ ಬ್ಯಾಂಕ್ ಉದ್ಯೋಗಿ ನಾರಾಯಣ ಹೆಗ್ಡೆ , ಕರ್ನಾಟಕ ಪೊಲೀಸ್ ಕ್ಲಬ್‌ ನ ಪದಾಧಿಕಾರಿಗಳು ಮತ್ತು ಸದಸ್ಯರು , ಮೋಹಿನಿ ಕೇಶವ ಹೆಗ್ಡೆ ಪಂಜಳ , ಕೃಷ್ಣ ರಾಜ್ ಪೋಳ್ಯ , ಜಯರಾಮ್ ಹೆಗ್ಡೆ ನಗರ , ಅರಣ್ಯ ಇಲಾಖೆಯ ಉದ್ಯೋಗಿ ರೋಹಿತ್ , ಗಂಗಾಧರ್ ಹೆಗ್ಡೆ , ಪ್ರಮೋದ್ ಹೆಗ್ಡೆ , ಹರಿಯಪ್ಪ ಹೆಗ್ಡೆ ,ರಾಮಚಂದ್ರ ಹೆಗ್ಡೆ , ಭವಾನಿ ಶಂಕರ್ ಹೆಗ್ಡೆ , ನಯನ ಶಿವಾನಂದ ಹೆಗ್ಡೆ , ಸಿಂಚನ ಪವನ್ ಹೆಗ್ಡೆ , ಮೃತರ ಪತ್ನಿ ಸುಮಂಗಲಿ ಹೆಗ್ಡೆ , ಪುತ್ರಿ ಫಿಲೋಮಿನಾ ಪ್ರೌಢಶಾಲಾ ಶಿಕ್ಷಕಿ ವಿದ್ಯಾಶ್ರೀ , ಅಳಿಯ ಪ್ರಶೀದ್ ಹೆಗ್ಡೆ ಬೆಂಗಳೂರು , ಸೊಸೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ರಚನಾ ವಿನಯರಾಜ್ , ಮೊಮ್ಮಕ್ಕಳಾದ ಇಶಾನ್, ಅಚಿಂತ್ಯ ಮತ್ತು ಶ್ರೀಖಾ ಸಹಿತ ಕುಟುಂಬ ಸದಸ್ಯರು, ಆತ್ಮೀಯರು ಹಾಗೂ ಹಿತೈಷಿಗಳು ಇದ್ದರು.

LEAVE A REPLY

Please enter your comment!
Please enter your name here