ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ದೋಷ ಪರಿಹಾರಾರ್ಥ ವೈದಿಕ ಕಾರ್ಯಕ್ರಮ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಕ್ಷೇತ್ರದಲ್ಲಿ ತಾಂಬೂಲ ಪ್ರಶ್ನೆ ನಡೆಸಿದಾಗ ಕಂಡು ಬಂದ ದೋಷಗಳ ಪರಿಹಾರ ಕಾರ್ಯಗಳು ಶ್ರೀ ದೇವಾಲಯದಲ್ಲಿ ಜೂ. 26ರಿಂದ ಆರಂಭಗೊಂಡಿತು.


ಶ್ರೀ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ ಗಣಹೋಮ, ಮಹಾ ನವಗ್ರಹ ಹೋಮ ಸಹಿತ ವಿವಿಧ ವೈದಿಕ ವಿಧಿವಿಧಾನಗಳು ನಡೆದವು. ಜೂ. 30ರವರೆಗೆ ಪರಿಹಾರ ಕಾರ್ಯಗಳು ಶ್ರೀ ದೇವಾಲಯದಲ್ಲಿ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಯ್ಕ್ ತಿಳಿಸಿದ್ದಾರೆ.‌


ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಿ. ಕೃಷ್ಣರಾವ್ ಅರ್ತಿಲ, ದೇವಿದಾಸ ರೈ, ಅನಿತಾ ಕೇಶವ ಗೌಡ, ಡಾ. ರಮ್ಯ ರಾಜಾರಾಮ್, ಸೋಮನಾಥ ದೇವಳದ ಪ್ರಧಾನ ಅರ್ಚಕ ಹರೀಶ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯ ಜಯಂತ ಪೊರೋಳಿ, ಕೈಲಾರು ರಾಜಗೋಪಾಲ ಭಟ್, ದೇವಾಲಯದ ವ್ಯವಸ್ಥಾಪಕ ವೆಂಕಟೇಶ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ದಿವಾಕರ ಗೌಡ, ಪದ್ಮನಾಭ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here