ಕುದ್ಮಾರು ಶಾಲೆಯಲ್ಲಿ ನಶಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

0

ಕಾಣಿಯೂರು: ಕುದ್ಮಾರು ಸ. ಉ. ಹಿ. ಪ್ರಾ. ಶಾಲೆಯಲ್ಲಿ ನಶಮುಕ್ತ ಭಾರತ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವು ಜೂ 26ರಂದು ಹಮ್ಮಿಕೊಳ್ಳಲಾಯಿತು.


ಶಾಲಾ ಅತಿಥಿ ಶಿಕ್ಷಕಿಯಾದ ಸಂಧ್ಯಾ ಕೆ.ಎ ಇವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಪರಿಚಯ, ಅವುಗಳ ಸೇವನೆಯಿಂದ ಆಗುವ ತೊಂದರೆಗಳು, ಅಕ್ರಮ ಕಳ್ಳ ಸಾಗಾಣಿಕೆ ಕುರಿತಾದ ಮಾಹಿತಿಗಳನ್ನು ನೀಡಿದರು. ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಜನತೆ ಹಾಗೂ ದಾರಿ ತಪ್ಪಿಸುತ್ತಿರುವ ವಿವಿಧ ಮೂಲಗಳು, ಹಾಗೂ ಇವುಗಳಿಂದ ಹೇಗೆ ದೂರವಿರಬಹುದು ಎನ್ನುವುದರ ಬಗ್ಗೆ ತಿಳಿಸಿದರು.


ಪ್ರಭಾರ ಮುಖ್ಯ ಗುರುಗಳಾದ ಶ್ರೀಲತಾ ರವರು ದಿನದ ಮಹತ್ವ, ಮಾದಕ ವಸ್ತುಗಳ ಬಳಕೆಯ ಬಗೆಗೆ ಹಾಗೂ ವಿದ್ಯಾರ್ಥಿಗಳು ಇದರಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳ ಬಗೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ನಮ್ಮ ಜಿಲ್ಲೆಯನ್ನು ನಶಮುಕ್ತ ಗೊಳಿಸಿ, ನಶಮುಕ್ತ ಭಾರತವನ್ನಾಗಿಸುವಲ್ಲಿ ಕೈಜೋಡಿಸುವ ಮಹತ್ವವನ್ನು ತಿಳಿಸಲಾಯಿತು.

ಶಿಕ್ಷಕಿ ವೀಣಾ ಕೆ ಸ್ವಾಗತಿಸಿ, ಶಿಕ್ಷಕಿ ಪ್ರಿಯಾಂಕಾ ಕೆ ಎಸ್ ವಂದಿಸಿದರು. ಶಿಕ್ಷಕಿ ವೀರಾಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here