ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೆರ್ಲಂಪಾಡಿ ಇದರ ವತಿಯಿಂದ ಕಸಿ ಕಟ್ಟುವಿಕೆ ಮತ್ತು ಸಮಗ್ರ ಮಿಶ್ರಬೆಳೆ ಬಗ್ಗೆ ಕೃಷಿ ತಜ್ಞರಿಂದ ಮಾಹಿತಿ ಕಾರ್ಯಗಾರ (ಕಾಳು ಮೆಣಸು ಮಿಶ್ರ ಬೆಳೆಯಾಗಿ ಅಡಿಕೆ ಹಾಗೂ ತೆಂಗು ತೋಟದಲ್ಲಿ ಸಮಗ್ರವಾಗಿ ಬೆಳೆಸುವ ಬಗ್ಗೆ) ಜೂ.28 ರಂದು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತ ಸ್ನೇಹಿ ಸಭಾಭವನದಲ್ಲಿ ನಡೆಯಿತು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಡಾ| ಎನ್. ಯದುಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿರಿಜಾ ಕೆ.,ಉಪಾಧ್ಯಕ್ಷ ಜನಾರ್ದನ ಗೌಡ ಉಪಸ್ಥಿತರಿದ್ದರು.
ರೇಷ್ಮಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ರಾಜೇಶ್ ಕುದ್ಕುಳಿ ಸ್ವಾಗತಿಸಿದರು. ಸತೀಶ್ ಪಾಂಬಾರು ವಂದಿಸಿದರು. ಪ್ರಭಾಕರ ರೈ ಕೊರ್ಬಂಡ್ಕ, ಲೆಕ್ಕಿಗರಾದ ಸುಬ್ಬಯ್ಯ ಕೆ. ನಿರೂಪಿಸಿದರು.