ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ

0

ನರಿಮೊಗರು: ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಜೂ.26ರಂದು ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ ಸ್ಥಾಪಕರ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಅಧ್ಯಕ್ಷರ ಧರ್ಮಪತ್ನಿ ಶ್ರೀಮತಿ ಕುಮಾರಿ, ಮಕ್ಕಳಾದ ವೇಣುಗೋಪಾಲ ಎಸ್ ಜೆ ಮತ್ತು ಅಂಬರೀಷ ಎಸ್ ಜೆ, ಅತಿಥಿಗಳಾದ ಕೆ ಸುರೇಶ್ ಶೆಟ್ಟಿ, ಸದಸ್ಯರು, ಅಂಬಿಕಾ ಮಹಾವಿದ್ಯಾಲಯ ಪುತ್ತೂರು ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರು, ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯರುಗಳಾದ ಎಸ್ ಜಿ ಕೃಷ್ಣ, ಪ್ರಸನ್ನ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾತನಾಡಿ ಅಧ್ಯಕ್ಷರಿಗೆ ಜನ್ಮದಿನದ ಶುಭಾಶಯ ಕೋರಿದರು.

ಅತಿಥಿಗಳು ಮಾತನಾಡಿ, ʼಒಂದು ವ್ಯಕ್ತಿಯ ಪರಿಚಯ ಗುಣನಡತೆ, ಕಾರ್ಯ, ಶಿಸ್ತು ಇಂತಹ ಎಲ್ಲಾ ಗುಣ ನಮ್ಮ ಶಿಬರ ಅವರಲ್ಲಿ ಇದೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಸಾಂದೀಪನಿ ಶಾಲೆಯ ಮಕ್ಕಳು ಬಹಳ ಶಿಸ್ತುವಂತರಾಗಿದ್ದಾರೆʼ ಎಂದ ಅವರು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹಾರೈಸಿದರು.

ಶಾಲಾ ಸಂಚಾಲಕರು ಮಾತನಾಡಿ, ಇಂತಹ ವಾತಾವರಣದಲ್ಲಿ ಮಾತನಾಡಲು ಅವಕಾಶ ಮಾಡಿದವರು ಹಾಗೂ ಶಾಲೆಯ ಜವಾಬ್ದಾರಿ ವಹಿಸಲು ಕಾರಣ ಜಯರಾಮ ಕೆದಿಲಾಯರು ಎಂದು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭ ಹಾರೈಸಿದರು. ಜನ್ಮ ದಿನದ ಪ್ರಯುಕ್ತ ಆಡಳಿತ ಮಂಡಳಿ ಸದಸ್ಯರಿಂದ ಹಾಗೂ ಶಿಕ್ಷಕರಿಂದ ಅಧ್ಯಕ್ಷರಿಗೆ ಹಾರಾರ್ಪಣೆ ಮಾಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ನಮ್ಮ ಶಾಲಾ ಸದಸ್ಯರಾದ ಎಸ್ ಜಿ ಕೃಷ್ಣ ರವರು ಬರೆದ ‘ಸರಳ ಸಜ್ಜನಿಕೆಯ ಹರಿಕಾರ’ – ಶ್ರೀ ಶಿಬರ ಜಯರಾಮ ಕೆದಿಲಾಯ ಎಂಬ ಪುಸ್ತಕದ ಬಿಡುಗಡೆ ಮಾಡಲಾಯಿತು.

ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ಮಾತನಾಡುತ್ತಾ, ನನಗಿಂತ ಹತ್ತು ವರ್ಷ ಹಿರಿಯರಾದ ಎಸ್ ಜಿ ಕೃಷ್ಣ ರವರು ನನ್ನ ಜೀವನ ಚರಿತ್ರೆಯನ್ನು ಬರೆದು ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ. ನನಗೆ ಸಾಧ್ಯವಾಗದನ್ನು ಮಾಡಿದ್ದಾರೆ, ಅವರಿಗೆ ನಾನು ತುಂಬಾ ಅಭಾರಿಯಾಗಿದ್ದೇನೆ. ಜಯರಾಜ ಆಚಾರ್ಯರು ಪ್ರಕಾಶನ ಮಾಡಿದಕ್ಕೆ ಹಾಗೂ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ರವರು ಎಲ್ಲರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರಶಾಂತಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಎಚ್ ಎಸ್ ವಂದಿಸಿದರು.

LEAVE A REPLY

Please enter your comment!
Please enter your name here