ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಟರಿ ಕ್ಲಬ್ ಪುತ್ತೂರುಗೆ ಗ್ಲೋಬಲ್ ಎಕ್ಸಲೆನ್ಸ್ ಸಹಿತ 4 ಪ್ರಶಸ್ತಿ

0

ಪುತ್ತೂರು; ಪುತ್ತೂರಿನಲ್ಲಿ 2024-25 ನೇ ಸಾಲಿನಲ್ಲಿ ಮಾಡಿರುವ ಹಲವಾರು ಜನಪರ ಹಾಗೂ ಶಾಶ್ವತ ಸೇವೆಗಳಿಗಾಗಿ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ನೇತೃತ್ವದ  ಸಮಿತಿಯಿಂದ, ಪಿಡಿಜಿ ಡಾ.ಭಾಸ್ಕರ್ ರವರ ಉಪಸ್ಥಿತಿಯಲ್ಲಿ ಮಂಗಳೂರಿನ ಪಿಲಿಕುಳ ಸ್ಕೌಟ್ ಹಾಗೂ ಗೈಡ್ಸ್ ಸಭಾಭವನದಲ್ಲಿ ಜೂ.21ರಂದು ನಡೆದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಪುತ್ತೂರಿನ ಹಿರಿಯ ಕ್ಲಬ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರುಗೆ ಪ್ರತಿಷ್ಠಿತ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿಯೇ ಟಾಪ್ ಅವಾರ್ಡ್ ಹಾಗೂ ಟಾಪ್ ಕ್ಲಬ್(85 ಕ್ಲಬ್) ಗಳಿಗೆ ನೀಡುವ ಅವಾರ್ಡ್ ಎನಿಸಿದ ಈ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಜೊತೆಗೆ ಎಂಗೇಜ್ಮೆಂಟ್ ಎಕ್ಸೆಲೆಂಟ್ ಅವಾರ್ಡ್, ಅಡಾಪ್ಟೆಬಿಲಿಟಿ ಎಕ್ಸಲೆನ್ಸ್ ಅವಾರ್ಡ್, ಔಟ್ ರೀಚ್ ಎಕ್ಸಲೆನ್ಸ್ ಅವಾರ್ಡ್ ರೋಟರಿ ಕ್ಲಬ್ ಪುತ್ತೂರುಗೆ ಪ್ರಾಪ್ತವಾಗಿದೆ. 1965 ರಲ್ಲಿ ಸ್ಥಾಪನೆಯಾದ ರೋಟರಿ ಕ್ಲಬ್ ಪುತ್ತೂರು ಪ್ರಸ್ತುತ ವರ್ಷ ಡೈಮಂಡ್ ಜ್ಯುಬಿಲಿಯನ್ನು ಆಚರಿಸುತ್ತಿದೆ. ಈ 60 ವರ್ಷಗಳಲ್ಲಿ ಪುತ್ತೂರಿಗೆ ಅತ್ಯಂತ ಅಗತ್ಯವೆನಿಸಿದ ಬ್ಲಡ್ ಬ್ಯಾಂಕ್ ಸ್ಥಾಪನೆ, ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ ಸೆಂಟರ್ ಸ್ಥಾಪನೆ, ರೋಟರಿ ಕಣ್ಣಿನ ಆಸ್ಪತ್ರೆ ಸ್ಥಾಪನೆ ಮುಂತಾದ ಶಾಶ್ವತ ಕೊಡುಗೆಗಳನ್ನು ಸಮಾಜಕ್ಕೆ ನೀಡಿರುತ್ತದೆ ಜೊತೆಗೆ ರೋಟರಿಪುರದಲ್ಲಿ ಫಲಾನುಭವಿಗಳಿಗೆ ಹಲವಾರು ಮನೆಗಳ ನಿರ್ಮಾಣ ಮಾಡಿ ಆ ಪರಿಸರಕ್ಕೆ ‘ರೋಟರಿ’ಪುರ ಎಂದು ನಾಮಕರಣವಾಗಿದ್ದು, ಇದೀಗ ಕ್ಲಬ್ ನ ಪ್ರಮುಖ ಪ್ರಾಜೆಕ್ಟ್ ಎನಿಸಿದ ಮೆಮೋಗ್ರಾಫಿ ಸೆಂಟರ್ ಅನ್ನು ಸಮಾಜಕ್ಕೆ ಪರಿಚಯಿಸುತ್ತಿದೆ.

ಕ್ಲಬ್ ನಲ್ಲಿ 110 ಮಂದಿ ಸದಸ್ಯರಿದ್ದು ರೋಟರಿ ಫೌಂಡೇಶನ್ ನ ಟಿ.ಆರ್.ಎಫ್ ಗೆ ಶೇ.100 ದೇಣಿಗೆ, ಪ್ರತಿ ತಿಂಗಳು ಚೇತನಾ ಆಸ್ಪತ್ರೆ, ಪ್ರಗತಿ ಆಸ್ಪತ್ರೆ, ಡಾ.ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ವಿವಿಧ ಉಚಿತ ಆರೋಗ್ಯ ಶಿಬಿರಗಳು, ಪ್ರತಿ ತಿಂಗಳು ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಹಾಗೂ ಪುತ್ತೂರು ಹೊರಗಡೆ ಉಚಿತ ಕಣ್ಣಿನ ತಪಾಸಣಾ ಶಿಬಿರಗಳು ಹೀಗೆ ಹಲವಾರು ಪ್ರಾಜೆಕ್ಟ್ ಗಳು ರೋಟರಿ ಕ್ಲಬ್ ಪುತ್ತೂರುನಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ.

ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಪರಮೇಶ್ವರ ಗೌಡ, ಎ.ಜೆ ರೈ, ಪ್ರೊ|ಝೇವಿಯರ್ ಡಿ’ಸೋಜ, ಸುದರ್ಶನ್ ರಾವ್, ಉಮಾನಾಥ್ ಪಿ.ಬಿ, ಎನ್.ಎಸ್ ನಟರಾಜ್, ಒ್ರೊ|ದತ್ತಾತ್ರೇಯ ರಾವ್, ಡಾ.ಜೈದೀಪ್, ಹೆರಾಲ್ಡ್ ಮಾಡ್ತಾ, ಶ್ರೀಧರ್ ಕಣಜಾಲು, ಜೈರಾಜ್ ಭಂಡಾರಿ, ಸುಜಿತ್ ಡಿ.ರೈ, ಪ್ರೇಮಾನಂದ ಬಿ.ರವರು ಉಪಸ್ಥಿತರಿದ್ದರು.

ಪಿ.ಡಿ ಕೃಷ್ಣಕುಮಾರ್ ರೈರವರಿಗೆ ಅನ್ಸಂಗ್ ರೋಟರಿ ಆ್ಯಕ್ಷನ್ ಚಾಂಪಿಯನ್ ಅವಾರ್ಡ್..
ರೋಟರಿ ಪುತ್ತೂರು ಇದರ ಹಿರಿಯ ಸದಸ್ಯ, ಮಾಜಿ ಅಧ್ಯಕ್ಷರೂ ಆಗಿದ್ದು, ರೋಟರಿ ಸಂಸ್ಥೆಯಲ್ಲಿ ತೆರೆಮರೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವ ಪಿ.ಡಿ ಕೃಷ್ಣಕುಮಾರ್ ರೈಯವರಿಗೆ ಪ್ರಸ್ತುತ ಸಾಲಿನ ಪ್ರತಿಷ್ಠಿತ ಅನ್ಸಂಗ್ ರೋಟರಿ ಆ್ಯಕ್ಷನ್ ಚಾಂಪಿಯನ್ ಅವಾರ್ಡ್ ಪುರಸ್ಕೃತರಾಗಿದ್ದಾರೆ. ಕ್ಲಬ್ ಅಭಿವೃದ್ಧಿಗೆ ಯಾರು ಯಾವುದೇ ಪ್ರಚಾರ ಬಯಸದೆ  ತೆರೆಮರೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ನೀಡುವ ಅವಾರ್ಡ್ ಇದಾಗಿದೆ.

LEAVE A REPLY

Please enter your comment!
Please enter your name here