ಪರ್ಲಡ್ಕ ಖಿಲ್ರ್ ಮಸ್ಜಿದ್ ನವೀಕರಣಗೊಂಡು ಉದ್ಘಾಟನೆ

0

ಪುತ್ತೂರು: 24 ವರ್ಷ ಮೊದಲು ಪರ್ಲಡ್ಕದ ಹಿರಿಯ ಉಮರಾಗಳ ನೇತೃತ್ವದಲ್ಲಿ ಪರ್ಲಡ್ಕ ಜಂಕ್ಷನಿನಲ್ಲಿ ನಿರ್ಮಿಸಲ್ಪಟ್ಟ ಖಿಲ್ರ್ ಮಸ್ಜಿದ್ ಪರ್ಲಡ್ಕ ಇದರ ನವೀಕರಣ ಕಾಮಗಾರಿ ಪೂರ್ಣಗೊಂಡು ಮಗ್ರಿಬ್ ನಮಾಜ್ ಸಮಯದಲ್ಲಿ ಉದ್ಘಾಟನೆಗೊಂಡಿತು.


ನವೀಕರಣ ಮಸೀದಿಯನ್ನು ಅಕ್ರಮ್ ಅಲಿ ತಂಗಲ್ ಅವರು ದುವಾ ನೆರವೇರಿಸಿ ನಂತರ ಉದ್ಘಾಟನೆಗೊಳಿಸಿದರು. ಖಿಲ್ರ್ ಮಸ್ಜಿದ್ ಇಮಾಮರಾದ ತಾಹಿಫ್ ಉಸ್ತಾದ್ ಅವರು ಸ್ವಾಗತ ಭಾಷಣವನ್ನು ನೆರವೇರಿಸಿದರು. ಮುಹಿಯುದ್ದೀನ್ ಜುಮಾ ಮಸ್ಜಿದ್ ಪರ್ಲಡ್ಕ ಇದರ ಖತೀಬರಾದ ಅಬ್ದುಲ್ ರಶೀದ್ ರಹ್ಮಾನಿ ಮಾತನಾಡಿ, ಅಲ್ಲಾಹುವಿನ ಭವನದ ಮಹತ್ವದ ಕುರಿತು ವಿವರಿಸಿ ಇದಕ್ಕೆ ಸಹಕರಿಸಿರುವ ಎಲ್ಲಾ ದಾನಿಗಳಿಗೆ ವಿಶೇಷವಾಗಿ ದುವಾ ಮಾಡಿದರು. ಸಾಲ್ಮರ ಖತೀಬರಾದ ಉಮರ್ ದಾರಿಮಿಯವರು ಮಾತನಾಡುತ್ತಾ ನಾಳೆ ಪರಲೋಕದಲ್ಲಿ ಪುಣ್ಯದಲ್ಲಿ ನಮಗೆ ಹೆಚ್ಚು ತೂಕವಿರುವ ಕಾರ್ಯ ಮಸೀದಿಯ ಜೊತೆಯುಳ್ಳ ಬಾಂದವ್ಯವಾಗಿದೆ ಎಂದರು.


ಪರ್ಲಡ್ಕದ ಉಮರಾ ನೇತಾರ ಹಂಝ ಹಾಜಿ ಮಾತನಾಡಿ ಪರ್ಲಡ್ಕದಲ್ಲಿ ಹಿರಿಯ ಉಮಾರ ನೇತಾರರು ಮಸೀದಿ ಮತ್ತು ಇನ್ನಿತರ ಪುಣ್ಯ ಕಾರ್ಯಗಳಿಗೆ ನೀಡಿದ ಕೊಡುಗೆಯ ಬಗ್ಗೆ ವಿವರಿಸಿದರು. ಅನ್ಸಾರುದ್ದೀನ್ ಜಮಾತ್ ಕಮಿಟಿ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ ನವೀಕರಣ ಮಸೀದಿಯ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು. ಖಿಲ್ರ್ ಮಸ್ಜಿದ್ ಅಧ್ಯಕ್ಷರಾದ ಅಯೂಬ್ ಅವರು ಮಾತನಾಡಿ ನಾವು ಕಮಿಟಿಯವರು ಸಮಾಲೋಚನೆ ನಡೆಸಿ ಸಣ್ಣ ಒಂದು ನವೀಕರಣದ ಯೋಜನೆಯನ್ನು ಮಾಡಿದ್ದೆವು ಆದರೆ ನಾವು ನವೀಕರಣದ ವಿಷಯವನ್ನು ಜಮಾತ್ ನವರಲ್ಲಿ ತಿಳಿಸಿದಾಗ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲವು ವ್ಯಕ್ತವಾಯಿತು. ದಾನಿಗಳ ಸಹಕಾರದಿಂದ ದೊಡ್ಡ ಮಟ್ಟದಲ್ಲಿ ಮಸೀದಿ ನವೀಕರಣ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಯಿತು. ಈ ನವೀಕರಣದ ಹಿಂದೆ ಊರಿನ ಎಲ್ಲಾ ಹಿರಿಯರು, ಉಮಾರಗಳು ಮತ್ತು ಯುವಕರ ಬಹಳ ಪರಿಶ್ರಮ ಇದೆ ಎಂದು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಫಾಮ್ ತಂಗಲ್, ಮಹಮ್ಮದ್ ಮುಸ್ಲಿಯಾರ್ ಮುಡೋಡಿ, ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಆಜಾದ್, ಕಾರ್ಯದರ್ಶಿ ಜುನೈದ್ ಸಾಲ್ಮರ, ಮುಹಿಯುದ್ದೀನ್ ಜುಮಾ ಮಸ್ಜಿದ್ ಪರ್ಲಡ್ಕ ಅಧ್ಯಕ್ಷರಾದ ರಝಾಕ್ ಹಾಜಿ, ಕಾರ್ಯದರ್ಶಿ ಫಾರೂಕ್ ನಿಷ್ಮಾ, ಖಿಲ್ರ್ ಮಸ್ಜಿದ್ ಮಾಜಿ ಅಧ್ಯಕ್ಷರಾದ PK ಅಬೂಬಕ್ಕರ್, ಹಮೀದ್ ಅಲೀಸ್, ಜೈನುದ್ದೀನ್ ಪರ್ಲಡ್ಕ, ಜಮಾತ್ ನ ಹಿರಿಯರಾದ ಅಬ್ದುಲ್ ರಹಿಮಾನ್ ಪೋಸ್ಟ್, ಮಹಮ್ಮದ್ ಕುಂಚಿ, MD ಮಹಮ್ಮದ್, ಇಬ್ರಾಹಿಂ ಕಕ್ಕಿಂಜೆ, ಅಬೂಬಕ್ಕರ್ ಪಲ್ಲ, ಹಮೀದ್ ಮಂಗಳ, ಅಬ್ದುಲ್ ಅಜೀಜ್ ಬಪ್ಪಳಿಗೆ, ಲತೀಫ್, ಶಮೀರ್, ಯಾಸಿರ್, ಸತ್ತಾರ್, ಜಾಕೀರ್ ಜಕ್ಕಿ, ಉದ್ಯಮಿಗಳಾದ ಆಸಿಫ್ ದರ್ಬೆ, ಸತ್ತಾರ್ ವಲ್ತಡ್ಕ, ರಿಯಾಜ್ ರಹಾ, ಪರ್ಲಡ್ಕ ಜಮಾತ್ ದುಬೈ ಕಮೀಟಿ ಸದಸ್ಯರಾದ ರಾಶೀದ್, ಜೈನುದ್ದೀನ್ ಮಾಂತೂರ್ ಮತ್ತು ಜಮಾತ್ ಕಮಿಟಿಯ ಯಂಗ್ ಮೆನ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಶುದ್ದೀನ್, ಅನ್ಸಾರ್, ಫಾರೂಕ್, ಸಿದ್ದೀಕ್, ನಿಜಾಮ್, ಸುಲೈಮಾನ್ ಮಿತ್ತೂರು, ಅಝಂ, ನಾಸಿರ್, ಅಫ್ರಾಜ್ ನಿರೂಪಿಸಿ, ಪ್ರ. ಕಾರ್ಯದರ್ಶಿ ಜಮಾಲ್ ವಂದಿಸಿದರು.

LEAVE A REPLY

Please enter your comment!
Please enter your name here