ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಚುನಾವಣೆ ಬಳಿಕ ಮೊದಲ ಮಂತ್ರಿ ಮಂಡಲ ಕಾರ್ಯ ಕಲಾಪ ನಡೆಯಿತು.
ಸ್ಪೀಕರ್ ಆಗಿ ಹತ್ತನೇ ತರಗತಿಯ ಗೌರವ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಮಂತ್ರಿ ಸನಾ ಶೆಟ್ಟಿ ಉಪ ಮುಖ್ಯಮಂತ್ರಿ ಫಾತಿಮ ಸನಿಯ್ಯ ಶಾಲಾ ಕಾರ್ಯದ ಬಗ್ಗೆ ವಿವರಿಸಿದರು. ವಿರೋಧ ಪಕ್ಷದ ನಾಯಕ/ಕಿ ವಿದ್ಯಾರ್ಥಿಗಳು ಕೆಲವೊಂದು ಕಾರ್ಯಗಳಲ್ಲಿನ ತಪ್ಪುಗಳನ್ನು ಎತ್ತಿ ಹಿಡಿಯುದರ ಮೂಲಕ ಕಲಾಪದಲ್ಲಿ ಚರ್ಚೆ ನಡೆಯಿತು.

ಸದನದಲ್ಲಿ ಮಾರ್ಗದಶಕರಾಗಿ ಶೇಖ್ ಜಲಾಲುದ್ದೀನ್ ,ಮುಖ್ಯ ಶಿಕ್ಷಕಿಯರಾದ ಜಯಶ್ರೀ ಬಿ.ಸಾಲ್ಯಾನ್, ಎಲ್ಸಿ ಲಸ್ರಾದೋ, ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಉಪಸ್ಥಿತರಿದ್ದರು.