ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಮತ್ತು ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇವುಗಳ ಜಂಟಿ ಪದಗ್ರಹಣ ಕಾರ್ಯಕ್ರಮಗಳು ಜೂ.28ರಂದು ಸಂಜೆ ರೋಟರಿ ಮನೀಷಾ ಹಾಲ್ನಲ್ಲಿ ನಡೆಯಿತು.

ಪದಪ್ರದಾನ ನೆರವೇರಿಸಿದ ಲಯನ್ಸ್ ಕ್ಲಬ್ನ ಪೂರ್ವ ಜಿಲ್ಲಾ ಗವರ್ನರ್ ಗೀತಪ್ರಕಾಶ್ ಮಾತನಾಡಿ, ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ನ ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ ವೇದಾವತಿಯವರು ಕ್ಲಬ್ನ ಅಂತರಾಷ್ಟ್ರೀಯ ಅಧ್ಯಕ್ಷರು ಹಾಗೂ ಜಿಲ್ಲೆಯ ಅಧ್ಯಕ್ಷರ ಕರೆಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದ ಕಳೆದ ಅವಧಿಯ ಕರೆಯನ್ನು ಯಶಸ್ಸಿಗೊಳಿಸುವಲ್ಲಿ ಸಫಲರಾಗುದ್ದಾರೆ. ಕ್ಲಬ್ನಲ್ಲಿ ಸದಸ್ಯರು ಇನ್ನೊಬ್ಬರ ಜೊತೆ ಹೋಲಿಕೆ ಮಾಡಬಾರದು. ನಮ್ಮಲ್ಲಿರುವ ಸಂಪನ್ಮೂಲಗಳಂತೆ ಕಾರ್ಯನಿರ್ವಹಿಸಿದಾಗ ಕ್ಲಬ್ಗ ಉತ್ತಮ ಭವಿಷ್ಯವಿದೆ. ಸದಸ್ಯರು ನಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಕೆಲಸ ಮಾಡಬೇಕು. ಪ್ರಾದೇಶಿಕ ಚಿಂತನೆಯಲ್ಲಿ ಕೆಲಸ ಮಾಡಿದಾಗ ಕ್ಲಬ್ಗಳು ಉಳಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಜಂಟೀ ಪಿಆರ್ಓ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕಳೆದ ಅವಧಿಯಲ್ಲಿ ಅಧ್ಯಕ್ಷೆ ವೇದಾವತಿಯವರ ನೇತೃತ್ವದಲ್ಲಿ ಕ್ಲಬ್ ಸಮಾಜಮುಖಿ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷವೂ ಅವರೇ ಅಧ್ಯಕ್ಷರಾಗಿದ್ದು ಇನ್ನಷ್ಟು ಉತ್ತಮ ಸೇವಾ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಟಾಪ್ ಟೆನ್ನಲ್ಲಿಉವ ಪುತ್ತೂರ್ದ ಮುತ್ತು ಕ್ಲಬ್ ಟಾಪ್ವನ್ ಆಗಿ ಮೂಡಿಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ನ ಅಧ್ಯಕ್ಷೆ ವೇದಾವತಿ ರಾಜೇಶ್ ಮಾತನಾಡಿ, ಕಳೆದ ಅವಧಿಯಲ್ಲಿ ಅಧ್ಯಕ್ಷೆ ಆಗಿದ್ದ ನನ್ನನ್ನು ಬಹುಮತದ ಮೇರೆಗೆ ಎರಡನೇ ಅವಧಿಗೆ ಮತ್ತೆ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಕಳೆದ ಅವಧಿಯಲ್ಲಿ 17 ಮಂದಿ ಸದಸ್ಯರಿದ್ದು ಪ್ರಸ್ತುತ ಕ್ಲಬ್ನ ಸದಸ್ಯರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಈ ವರ್ಷದಲ್ಲಿ ಸದಸ್ಯರ ಸಂಖ್ಯೆಯನ್ನು 30ಕ್ಕೆ ಏರಿಕೆ ಮಾಡುವ ಗುರಿಯಿದೆ. ಕಳೆದ ಅವಧಿಯಲ್ಲಿ ಕ್ಲಬ್ ಎಲ್ಲರ ಸಹಕಾರದಿಂದ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದು ಜಿಲ್ಲೆಯಲ್ಲಿ ಟಾಪ್ ಟೆನ್ ಸ್ಥಾನದಲಿದ್ದೇವೆ. ಪುತ್ತೂರು ಮುತ್ತು ಸ್ಟಾಂಡರ್ಡ್ ಅಗಿ ಬರಬೇಕು. ಕ್ಲಬ್ಗೆ ಯುವ ಜನತೆಯನ್ನು ಸೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕ್ಲಬ್ನ ಪ್ರಾಂತೀಯ ಅಧ್ಯಕ್ಷ ಪಾವನರಾಮ್, ವಲಯಾಧ್ಯಕ್ಷ ಸುದೇಶ್ ಭಂಡಾರಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ನಿಕಟಪೂರ್ವ ಅಧ್ಯಕ್ಷ ರವೀಂದ್ರ ಪೈ, ಕ್ಲಬ್ನ ನಿರ್ಗಮಿತ ಕಾರ್ಯದರ್ಶಿ ಭಾಗ್ಯೇಶ್ ರೈ, ಕೋಶಾಧಿಕಾರಿ ವತ್ಸಲಾ ಪಿ. ಶೆಟ್ಟಿ, ನೂತನ ಕೋಶಾಧಿಕಾರಿ ಸುಪ್ರೀತ್ ಕಣ್ಣಾರಾಯ, ಲಿಯೋ ಕ್ಲಬ್ ನೂತನ ಅಧ್ಯಕ್ಷ ಚಿಂತನ್ ಸಾಲ್ಯಾನ್, ಕಾರ್ಯದರ್ಶಿ ಶ್ರೀಶಾ ಎನ್ ನಾಯಕ್, ಕೋಶಾಧಿಕಾರಿ ಡಾ. ವಜಿದಾ ಬಾನು, ನಿರ್ಗಮಿತ ಅಧ್ಯಕ್ಷ ಲ್ಯಾನ್ಸನ್ ಪ್ರೀತ್ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.’
ಸೇವಾ ಚಟುವಟಿಕೆಗಳು:
ಕ್ಲಬ್ನ ಸೇವಾ ಚಟುವಟಿಕೆಗಳ ಮೂಲಕ ಬನ್ನೂರು ಹಿ.ಪ್ರಾ ಶಾಲೆಗೆ ಟೇಬಲ್, ವಿಶೇಷ ಚೇತನ ವಿದ್ಯಾರ್ಥಿ ಅಬ್ದುಲ್ ರಾಯಿಫ್ಗೆ ಧನಸಹಾಯ, ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವೈಭವ್ ಪೂಜಾರಿ ಪ್ರತಿಭಾ ಪುರಸ್ಕಾರ ಹಾಗೂ ಸಂತ ವಿಕ್ಟರಣ ಬಾಲಿಕ ಪ್ರೌಢಶಾಲೆಯ ಭವಿಶ್ರೀಗೆ ಶಾಲಾ ಶುಲ್ಕವನ್ನು ಹಸ್ತಾಂತರಿಸಲಾಯಿತು.’
ಸನ್ಮಾನ:
ಪದಪ್ರದಾನ ಅಧಿಕಾರಿಯಾಗಿದ್ದ ಕ್ಲಬ್ ಪೂರ್ವ ಜಿಲ್ಲಾ ಗವರ್ನರ್ ಗೀತಪ್ರಕಾಶ್, ಜಿಲ್ಲಾ ಜಂಟೀ ಪಿಆರ್ಓ ಕಾವು ಹೇಮನಾಥ ಶೆಟ್ಟಿ, ಕ್ಲಬ್ನ ನಿರ್ಗಮಿತ ಕಾರ್ಯದರ್ಶಿ ಭಾಗ್ಯೇಶ್ ರೈ, ಲಿಯೋ ಕ್ಲಬ್ನ ನಿಯೋಜಿತ ಅಧ್ಯಕ್ಷ ಲ್ಯಾನ್ಸನ್ ಪ್ರೀತ್ ಮಸ್ಕರೇನಸ್ರವರನ್ನು ಸನ್ಮಾನಿಸಲಾಯಿತು. ಕ್ಲಬ್ನ ಪ್ರಾಂತೀಯ ಅಧ್ಯಕ್ಷ ಪಾವನರಾಮ್ ಹಾಗೂ ವಲಯಾಧ್ಯಕ್ಷ ಸುದೇಶ್ ಭಂಡಾರಿಯವನ್ನು ಗೌರವಿಸಲಾಯಿತು.
ನೂತನ ಸದಸ್ಯರ ಸೇರ್ಪಡೆ;
ಕ್ಲಬ್ಗೆ ನೂತನ ಸದಸ್ಯರಾಗಿ ಪ್ರತಿಮಾ ರೈ, ಪ್ರಭಾಕರ್ ಅವರು ಸೇರ್ಪಡೆಗೊಂಡರು. ಅಲ್ಲದೆ ಪಾಣಾಜೆ ಕ್ಲಬ್ನಿಂದ ಮಹಮ್ಮದ್ ಕುಕ್ಕುವಳ್ಳಿ, ದಯಾನಂದ ರೈ ಕೋರ್ಮಂಡ, ಜಲೀಲ್ ಬೈತ್ತಡ್ಕ ಹಾಗೂ ನವೀನ್ ರೈ ಚೆಲ್ಯಡ್ಕ ಪುತ್ತೂರು ಕ್ಲಬ್ಗೆ ಸೇರ್ಪಡೆಯಾದರು.
ಸುಪ್ರೀತ್ ಕಣ್ಣಾರಾಯ ಲಯನ್ ಪ್ರಾರ್ಥನೆ ಹಾಡಿದರು. ಅಧ್ಯಕ್ಷೆ ವೇದಾವತಿ ಸ್ವಾಗತಿಸಿದರು. ರಂಜಿನಿ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಸಂತೋಷ್ ರೈ, ಚಂದ್ರಶೇಖರ, ಪ್ರತಿಮಾ ರೈ, ಪದ್ಮಪ್ರಸಾದ್ ಜೈನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಅನಸೂಯ ಬಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ಸಭಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ನ ಅಧ್ಯಕ್ಷೆ ವೇದಾವತಿಯವರ ಪತಿ ರಾಜೇಶ್, ಪುತ್ರಿ ಪ್ರೋ,ನಿಶಾ, ಪುತ್ರ ನಿರೂಪ್, ಸೊಸೆ ಕೃಪಾ, ಮೊಮ್ಮಕ್ಕಳಾದ ನಿಯಾನ್ಶಿ, ಹಾಗೂ ಆರುಷಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ವಿಶ್ವಶಾಂತಿಗಾಗಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಜಿಲ್ಲಾ ನಿಯೋಜಿತ ಪಿಆರ್ಓ ಸುದರ್ಶನ್ ಪಡಿಯಾರ್, ಪ್ರಾಂತೀಯ ಅಂಬಾಸಿಡರ್ ಲ್ಯಾನ್ಸಿಮಸ್ಕರೇನಸ್, ನಿಯೋಜಿತ ವಲಯಾಧ್ಯಕ್ಷ ಜೆಸಿಂತಾ ಮಸ್ಕರೇನಸ್, ಪ್ರಾಂತೀಯ ವೆಂಕಟೇಶ್ ಹೆಬ್ಬಾರ್, ಲಯನ್ ಗೈಡ್ ಗಣೇಶ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಲಿಯೋ ಕ್ಲಬ್ ಜಿಲ್ಲಾ ಪೂರ್ವಾಧ್ಯಕ್ಷೆ ಡಾ.ರಂಜಿತಾ ಹೆಚ್ ಶೆಟ್ಟಿ, ಮೆಸ್ಕಾಂ ಜೂನಿಯರ್ ಇಂಜಿನಿಯರ್ ರಮೇಶ್, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ ಸೇರಿದಂತೆ ಲಯನ್ಸ್ ಕ್ಲಬ್ನ ವಲಯದ ಎಲ್ಲಾ ಕ್ಲಬ್ಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪದ ಸ್ವೀಕಾರ
ಕ್ಲಬ್ನ 2025-26ನೇ ಸಾಲಿನ ಅಧ್ಯಕ್ಷರಾಗಿ ವೇದಾವತಿ ರಾಜೇಶ್, ಕಾರ್ಯದರ್ಶಿಯಾಗಿ ಅನಸೂಯ ಬಾ ಟಿ., ಕೋಶಾಧಿಕಾರಿಯಾಗಿ ಸುಪ್ರೀತಿ ಬಿ.ಬಿ., ಉಪಾಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಚಂದ್ರಶೇಖರ ಪಿ., ನಿಟಕ ಪೂರ್ವಾಧ್ಯಕ್ಷರಾಗಿ ರವೀಂದ್ರ ಪೈ, ಮುಖ್ಯ ಸಲಹೆಗಾರರಾಗಿ ಲ್ಯಾನ್ಸಿ ಮಸ್ಕರೇನಸ್, ಸಂಯೋಜಕರಾಗಿ ಮಹಮ್ಮದ್ ಕುಕ್ಕುವಳ್ಳಿ, ಸರ್ವೀಸ್ ಚೇರ್ ಪರ್ಸನ್ ಆಗಿ ಭಾಗ್ಯೇಶ್ ರೈ, ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಪದ್ಮಪ್ರಸಾದ್ ಜೈನ್, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಆಗಿ ದಯಾನಂದ ರೈ ಕೋರ್ಮಂಡ, ಪಿಆರ್ಓ ಆಗಿ ರಂಜಿನಿ ಶೆಟ್ಟಿ, ಕ್ಲಬ್ ಮಾರ್ಕೆಟಿಂಗ್ ಕೋ ಆರ್ಡಿನೇಟರ್ ಆಗಿ ಭಾಸ್ಕರ ಸುವರ್ಣ, ಮೆಂಬರ್ಶಿಪ್ ಚೆರ್ಪರ್ಸನ್ ಆಗಿ ಕೇಶವ ಪೂಜಾರಿ, ಕ್ಲಬ್ ಟೀಮ್ ಅಗಿ ಸಂತೋಷ್ ರೈ, ಕ್ಲಬ್ ಟೈಲ್ ಟ್ವಿಸ್ಟರ್ ಆಗಿ ಅಬೂಬಕ್ಕರ್ ಮುಲಾರ್, ನಿರ್ದೇಶಕರಾಗಿ ವತ್ಸಲಾ ಪಿ.ಶೆಟ್ಟಿ, ಅನಿಲ್ ಮಸ್ಲರೇನಸ್, ಮೀನಾಕ್ಷಿ ಆರ್., ಸುಮಿತ್ರ ಎಸ್., ಲೆರಿಸ್ಸಾ ಪ್ರಿನ್ಸ್ ಮಸ್ಕರೇನಸ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ಚಿಂತನ್ ಸಾಲ್ಯಾನ್ ಬಿ., ಕಾರ್ಯದರ್ಶಿಯಾಗಿ ಶ್ರೀಶಾ ಎನ್ ನಾಯಕ್ ಹಾಗೂ ಕೋಶಾಧಿಕಾರಿಯಾಗಿ ಡಾ.ವಜಿದಾ ಬಾನು ಪದ ಸ್ವೀಕಾರ ಮಾಡಿದರು.
ಸುಪ್ರೀತ್ ಕಣ್ಣಾರಾಯ ಲಯನ್ ಪ್ರಾರ್ಥನೆ ಹಾಡಿದರು. ಅಧ್ಯಕ್ಷೆ ವೇದಾವತಿ ಸ್ವಾಗತಿಸಿದರು. ರಂಜಿನಿ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಸಂತೋಷ್ ರೈ, ಚಂದ್ರಶೇಖರ, ಪ್ರತಿಮಾ ರೈ, ಪದ್ಮಪ್ರಸಾದ್ ಜೈನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಅನಸೂಯ ಬಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ಸಭಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ನ ಅಧ್ಯಕ್ಷೆ ವೇದಾವತಿಯವರ ಪತಿ ರಾಜೇಶ್, ಪುತ್ರಿ ಪ್ರೋ,ನಿಶಾ, ಪುತ್ರ ನಿರೂಪ್, ಸೊಸೆ ಕೃಪಾ, ಮೊಮ್ಮಕ್ಕಳಾದ ನಿಯಾನ್ಶಿ, ಹಾಗೂ ಆರುಷಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ವಿಶ್ವಶಾಂತಿಗಾಗಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಜಿಲ್ಲಾ ನಿಯೋಜಿತ ಪಿಆರ್ಓ ಸುದರ್ಶನ್ ಪಡಿಯಾರ್, ಪ್ರಾಂತೀಯ ಅಂಬಾಸಿಡರ್ ಲ್ಯಾನ್ಸಿಮಸ್ಕರೇನಸ್, ನಿಯೋಜಿತ ವಲಯಾಧ್ಯಕ್ಷ ಜೆಸಿಂತಾ ಮಸ್ಕರೇನಸ್, ಪ್ರಾಂತೀಯ ವೆಂಕಟೇಶ್ ಹೆಬ್ಬಾರ್, ಲಯನ್ ಗೈಡ್ ಗಣೇಶ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಲಿಯೋ ಕ್ಲಬ್ ಜಿಲ್ಲಾ ಪೂರ್ವಾಧ್ಯಕ್ಷೆ ಡಾ.ರಂಜಿತಾ ಹೆಚ್ ಶೆಟ್ಟಿ, ಮೆಸ್ಕಾಂ ಜೂನಿಯರ್ ಇಂಜಿನಿಯರ್ ರಮೇಶ್, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ ಸೇರಿದಂತೆ ಲಯನ್ಸ್ ಕ್ಲಬ್ನ ವಲಯದ ಎಲ್ಲಾ ಕ್ಲಬ್ಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.